ಏನ್ ಸುಳ್ಳು ಹೇಳಿದ್ನೋ, ಯಾಕೆ ಗಲಾಟೆ ಆಯ್ತೋ ಗೊತ್ತಿಲ್ಲ : ಡಿ ಕೆ ಶಿವಕುಮಾರ್

suddionenews
1 Min Read

ಮೈಸೂರು: ಇಂದು ರಾಮನಗರದಲ್ಲಿ ನಡೆದ ಸರ್ಕಾರಿ ವೇದಿಕೆಯಲ್ಲೇ ಸಂಸದರು, ಸಚಿವರು ಕಿತ್ತಾಡಿಕೊಂಡ ಘಟನೆ ನಡದಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಇದ್ದ ವೇದಿಕೆಯಲ್ಲಿ ಅಶೋಕ್ ಅದೇನು ಸುಳ್ಳು ಹೇಳಿದ್ನೋ, ಯಾಕೆ ಗಲಾಟೆ ಆಯ್ತೋ ಗೊತ್ತಿಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಜಾಸ್ತಿ ಹೇಳ್ತಾನೆ. ವೇದಿಕೆಯಲ್ಲಿ ಅದೇನು ಸುಳ್ಳು ಹೇಳಿದ್ನೋ. ಮಾಹಿತಿ ಪಡೆದು ಈ ಬಗ್ಗೆ ಮಾತನಾಡುತ್ತೇನೆ. ಸೌಜನ್ಯಕ್ಕಾದರೂ ಅಶ್ವಥ್ ನಾರಾಯಣ್ ನಮ್ಮ ಜೊತೆ ಮಾತನಾಡಿಲ್ಲ. ಅಶ್ವಥ್ ನಾರಾಯಣ್ ಗೂ ರಾಮನಗರಕ್ಕು ಏನ್ರೀ ಸಂಬಂಧ. ಕುಮಾರಸ್ವಾಮಿ ಅವರಾದ್ರೂ ಕೆಲ ಕಟ್ಟೆಗಳನ್ನ ಕಟ್ಟಿದ್ದಾರೆ.

ಸರ್ಕಾರ ಬಂದಾದ ಮೇಲಾದರೂ ಎನಾದರೂ ಮಾಡಿದ್ದಾರಾ..? ಈಗ ಉದ್ಘಾಟನೆ ಮಾಡಿರುವ ಮೂರ್ತಿಯನ್ನು ನಾನ್ ಮಾಡಿಸಿದ್ದು. ಇದುವರೆಗೂ ಅವರು ಏನು ಮಾಡಿದ್ದಾರೆ ಅನ್ನೋದನ್ನ ಲೀಸ್ಟ್ ಕೊಡಲಿ ನೋಡೋಣಾ ಎಂದು ಸವಾಲು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *