ನಾವೂ ಹೆಂಗಸ್ರು, ಅವ್ರು ಗಂಡಸ್ರು.. : ಡಿಕೆಶಿ ಹಿಂಗ್ಯಾಕಂದ್ರು..?

suddionenews
1 Min Read

ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಾಳೆಯಿಂದ ಪಾದಯಾತ್ರೆ ಶುರು ಮಾಡಲಿದ್ದಾರೆ. ಸದ್ಯ ಕೊರೊನಾ ಹೆಚ್ಚಳದ ಹಿನ್ನೆಲೆ ರಾಜ್ಯದಲ್ಲೂ ಟಫ್ ರೂಲ್ಸ್ ಜಾರಿಯಲ್ಲಿದೆ. ಹೀಗಾಗಿ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿದ್ದು, ಎಲ್ಲಿದೆ ರೀ ಕೊರೊನಾ. ಯಾರಾದರೂ ಐಸಿಯು ನಲ್ಲಿ ಅಡ್ಮಿಟ್ ಆಗಿದ್ದಾರಾ..? ಕೊರೊನಾದಿಂದ ಯಾರಾದ್ರೂ ನರಳುತ್ತಿದ್ದಾರಾ..? ಈಗಾಗಲೇ ಅಧಿಕಾರಿಗಳು ಕೇಸ್ ಹಾಕುವಂತೆ ಹೇಳಿದ್ದಾರೆ ನಮಗೆ ಏನು ತೊಂದರೆ ಕೊಡ್ತಾರೋ ಕೊಡಲಿ ಎಂದಿದ್ದಾರೆ.

ಬಿಜೆಪಿಯವರು ನಮ್ಮ ಪಾದಯಾತ್ರೆ ತಡೆಯಬೇಕು ಅಂತ ಸುಳ್ಳು ಪ್ರಕರಣ ಸಂಖ್ಯೆಯನ್ನು ದಾಖಲಿಸುತ್ತಿದ್ದಾರೆ. ಬಿಜೆಪಿಯಲ್ಲಿ ವೀರರೂ, ಶೂರರೂ ಇದ್ದಾರೆ. ನಾವೂ ಹೆಂಗಸರು, ನಾವೂ ಶಿಖಂಡಿಗಳು, ನಾವೆಲ್ಲಾ ಸೀರೆಯುಟ್ಟಿದ್ದೇವೆ. ನೀವೇ ನೋಡಿದ್ದೀರಲ್ಲ ಗಂಡಸು ಯಾರೆಂದು. ಸಿಎಂ ಮುಂದೆಯೇ ಹೇಳಿದ್ದಾರಲ್ಲ. ಅದಕ್ಕೆ ನಾವೆಲ್ಲಾ ಹೆದರುತ್ತೇವೆ. ನಾಳೆ ಪಾದಯಾತ್ರೆಯನ್ನ ಮಾಡಿಯೇ ಮಾಡ್ತೇವೆ ಎಂದು ಚಾಲೆಂಜ್ ಹಾಕಿದ್ದಾರೆ.

ಬಿಜೆಪಿಗರು ಹೆಣದಲ್ಲಿ, ಔಷಧಿಯಲ್ಲಿ, ಪರಿಹಾರದಲ್ಲಿ ಹಣ ಹೊಡೆದಿದ್ದಾರೆ. ಇದು 40 ಪರ್ಸೆಂಟ್ ಕಮಿಷನ್ ಸರ್ಕಾರ. ಇದನ್ನೆಲ್ಲಾ ನಾವೆಲ್ಲಿ ಬಯಲಿಗೆಳೆಯುತ್ತಿವೋ ಅಂತ ನಮ್ಮನ್ನ ಹತ್ತಿಕ್ಕಲು ಯತ್ನಿಸುತ್ತಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ರೈತರಿಗೆ, ಬಡವರಿಗೆ ಕಾಂಗ್ರೆಸ್ ಮಾಡಿದ್ದಷ್ಟು ಸಹಾಯವನ್ನ ಬಿಜೆಪಿ ಮಾಡಲಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *