Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೊಡ್ಡ ಲೀಡರ್ಸ್ ಮೊದಲು ಅವರ ಮೂತಿ ಒರೆಸಿಕೊಳ್ಳಲಿ : ಡಿಕೆ ಶಿವಕುಮಾರ್ ವ್ಯಂಗ್ಯ

Facebook
Twitter
Telegram
WhatsApp

 

ಬೆಂಗಳೂರು: ಸಿದ್ದರಾಮೋತ್ಸವ ಸಮಾವೇಶ ವಿಚಾರವಾಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಸಿದ್ಧರಾಮೋತ್ಸವ ಸಮಾವೇಶಕ್ಕೆ ಎಲ್ಲಾ ಹೋಗಬೇಕು ಅಂತ ತಿರ್ಮಾನ ಮಾಡಿದ್ದೇವೆ. ಇದು ನಮ್ಮ‌ಪಕ್ಷದ ನಾಯಕರ ಕಾರ್ಯಕ್ರಮ. ನಮ್ಮ‌ ಪಕ್ಷದ ರಾಹುಲ್ ಗಾಂಧಿ‌ ಸಹ ಬರಲಿದ್ದಾರೆ. ಇದು ನಮ್ಮ ಪಕ್ಷದ ಕಾರ್ಯಕ್ರಮ. ಪಕ್ಷದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಮಾವೇಶ ಪಕ್ಷಾತೀತವಾದ ಕಾರ್ಯಕ್ರಮ ಅನ್ನೋ ಸ್ವಾಗತ ಸಮಿತಿ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ ಡಿಕೆ ಶಿವಕುಮಾರ್.

ಜಡ್ಜ್ ಮುಂದೆ ಎಲ್ಲರ ಹೆಸರು ಹೇಳಲು ಸಿದ್ದ ಎಂದು ಅಮೃತ ಪೌಲ್ ಹೇಳಿರುವ ವಿಚಾರವಾಗಿ ಮಾತನಾಡಿದ ಡಿ.ಕೆ ಶಿವಕುಮಾರ್, ಫ್ರೀ ಹ್ಯಾಂಡ್ ಫೇರ್ ಆಗಿ ತನಿಖೆಯಾಗಬೇಕು. ಯಾರ್ಯಾರು ಭಾಗಿಯಾಗಿದ್ದಾರೆಂದು ಹೇಳಬೇಕು. ರಾಜ್ಯದ ಹಿತಕ್ಕಾಗಿ ಹೇಳಬೇಕು ಎಂದು ನಾವು ಒತ್ತಾಯ ಮಾಡಿದ್ದೇವೆ. ಸಂಜೆ ಸಾಂಕೇತಿಕವಾಗಿ ಧರಣಿ ನಡೆಸಲಿದ್ದೇವೆ. ಕೇವಲ ಅಮೃತ್ ಪೌಲ್ ಹೇಳಿಕೆ ಮಾತ್ರವಲ್ಲ. ಅರೆಸ್ಟ್ ಆದ ಎಲ್ಲರ ಹೇಳಿಕೆಗಳೂ ಮುಖ್ಯ.

ಯಾರಿಗೆ ಎಷ್ಟು ಹಣ‌ಕೊಟ್ಟಿದ್ದಾರೆ?. ಯಾರು ಫೋನ್ ಮಾಡಿ ಬಿಡಿಸಿದ್ರು? ಮತ್ತೆ ಯಾಕೆ ಸರೆಂಡರ್ ಮಾಡಿಸಿದ್ರು?. ಹಣ ವಾಪಸ್ ಕೊಡಿಸ್ತೇನೆ ಅಂತಾ ಹೇಳಿದ್ದಾರೆ. ಇವರೆಲ್ಲರ‌ ಹೆಸರು ಇದೆ, ನನಗೆ ಮಾಹಿತಿ ಇದೆ. ಸಮಯ ಬಂದಾಗ ಮಾತನಾಡ್ತೇನೆ. ಪರೋಕ್ಷವಾಗಿ ಸಚಿವ ಅಶ್ವಥ್ ನಾರಾಯಣ್ ಕಡೆಗೆ ಡಿಕೆಶಿ ಮತ್ತೊಮ್ಮೆ ಬೊಟ್ಟು ಮಾಡಿದ್ದಾರೆ.

ಅಭಯ ಪಾಟೀಲ್ ಮೇಲೆ ದಾಳಿ ಮಾಡಲು ಸ್ಪೀಕರ್ ಅನುಮತಿ ಕೇಳಿದ ವಿಚಾರವಾಗಿ, ಜಮೀರ್ ದು ನೆಕ್ಸ್ಟ್ ಮಾಡಿ. ನನ್ನ ಮೇಲೆ ದಾಳಿ‌ ಮಾಡಿದ್ರಲ್ಲಾ. ಆಗ ಸ್ಪೀಕರ್ ಅನುಮತಿ ಕೇಳಿಲ್ಲ. ಸರ್ಕಾರದ ಅನುಮತಿ ಅಷ್ಟೇ ಎಂದು ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿ ಹವಾಲ ದಂಧೆಯಲ್ಲಿ ಭಾಗಿಯಾಗಿದ್ದರು ಎಂಬ ಬಿಜೆಪಿ ಟ್ವೀಟ್ ವಿಚಾರಕ್ಕೆ ಮೊದಲು ಅವರ ಲೀಡರ್, ದೊಡ್ಡ ಲೀಡರ್ಸ್ ಅವರ ಮೂತಿ ಕ್ಲೀನ್‌ ಮಾಡಿಕೊಳ್ಳಲಿ. ಮೂತಿ ಒರೆಸಿಕೊಳ್ಳುವ ಆಕ್ಷನ್‌ ಮಾಡಿ ವ್ಯಂಗ್ಯ ಮಾಡಿದ್ದಾರೆ ಡಿಕೆ ಶಿವಕುಮಾರ್.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ,

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..! ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್

error: Content is protected !!