ಪಾದಯಾತ್ರೆ ವೇಳೆಯೂ ಮೊಳಗಿತು ಡಿಕೆ ಜೈಕಾರ : ಇದಕ್ಕೆ ಡಿಕೆಶಿ ಪ್ರತಿಕ್ರಿಯೆ ಏನು ಗೊತ್ತಾ..?

suddionenews
1 Min Read

 

ರಾಮನಗರ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನವರು ಮಾಡುತ್ತಿರುವ ಪಾದಯಾತ್ರೆಗೆ ಇಂದಿಗೆ ಮೂರು ದಿನ. ಸರ್ಕಾರದ ಕೊರೊನಾ ಟಫ್ ರೂಲ್ಸ್ ನಡುವೆಯೂ ಪಾದಯಾತ್ರೆ ನಡೆಯುತ್ತಲೇ ಇದೆ.

ಪಾದಯಾತ್ರೆ ವೇಳೆ ಡಿಕೆಶಿ ಬೆಂಬಲಿಗರು ಮತ್ತು ಅಭಿಮಾನಿಗಳು ಡಿಕೆ.. ಡಿಕೆ ಎಂದು ಜೋರಾಗಿ ಕೂಗಿದ್ದಾರೆ.

ಘೋಷಣೆ ಕೂಗುತ್ತಿದ್ದ ವೇಳೆಯೇ ಆ ಜಾಗಕ್ಕೆ ಸಿದ್ದರಾಮಯ್ಯ ಆಗಮಿಸಿದ್ದಾರೆ. ಈ ವೇಳೆ ಡಿಕೆಶಿ ತನ್ನ ಬೆಂಬಲಿಗರಿಗೆ ಏಯ್ ಸುಮ್ಮನಿರ್ರೋ ಸಿದ್ದರಾಮಯ್ಯ ಇದ್ದಾರೆ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಇದನ್ನ ಕೇಳಿಸಿಕೊಂಡ ಬೆಂಬಲಿಗರು ಡಿಕೆ..ಡಿಕೆ ಎಂಬ ಜೈಕಾರವನ್ನ ನಿಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಆಗಾಗ ಡಿಕೆಶಿ ಬೆಂಬಲಿಗರು ಹಾಗೂ ಸಿದ್ದರಾಮಯ್ಯ ಬೆಂಬಲಿಗರೂ ಜೈಕಾರ ಹಾಕುವ ಘಟನೆ ನಡೆಯುತ್ತಲೇ ಇರುತ್ತದೆ. ಇದು ಕೆಲವೊಂದು ಅಸಮಾಧಾನಕ್ಕೂ ಕಾರಣವಾಗಿತ್ತು. ಆದ್ರೆ ಇತ್ತೀಚೆಗೆ ಹೀಗೆ ಪ್ರತ್ಯೇಕ ಕೂಗಿಗೆ ನಾಯಕರೇ ಸುಮ್ಮನೆ ಮಾಡುವ ಪ್ರಯತ್ನ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *