ಜಲಧಾರೆ ಎಂದರೆ ಏನೆಂದು ಕುಮಾರಸ್ವಾಮಿ ಹೇಳಲಿ : ಡಿಕೆಶಿ ಪ್ರಶ್ನೆ..!

suddionenews
1 Min Read

 

ಚಿಕ್ಕಬಳ್ಳಾಪುರ: ಮೇಕೆದಾಟು ಯೋಜನೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದರು. ಸರ್ಕಾರದ 100 ಕೋಟಿ ಅನುದಾನ ಘೋಷಣೆ ಮಾಡಿದೆಯಲ್ಲ ಈಗ ಏನು ಮಾಡ್ತೀರಾ..? ಆ ಹಣದಲ್ಲಿ ಕೆಲಸ‌ ಮಾಡಲು ಸಾಧ್ಯವೇ..? 10 ದಿನ ಭೂರಿ ಬೋಜನ ಮಾಡಿದ್ದೇ ಬಂತು ಎಂದು ಹೇಳಿದ್ದರು.

ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಜಲಧಾರೆ ಬಗ್ಗೆ ವಿವರ ನೀಡಲು ಕೇಳಿದ್ದಾರೆ.

ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕ್ರಮ ಹೈಜಾಕ್ ಮಾಡಿದ್ದಾರೆಂದು ಹೇಳಿದ್ದಾರಲ್ಲ, ಯಾಕೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಲಿ. ಜೆಡಿಎಸ್ ನವರ ಜಲಧಾರೆ ಯೋಜನೆಗೆ ನಾವೂ ಬೆಂಬಲ‌ ನೀಡುತ್ತೇವೆ. ಜಲಧಾರೆ ಎಂದರೆ ಏನೆಂದು ಕುಮಾರಸ್ವಾಮಿಯವರು ವಿವರ ನೀಡಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *