Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ರಾಜ್ಯದ ಸಚಿವ, ಶಾಸಕರಿಗೆ ಚಿನ್ನ ಲೇಪಿತ ಬ್ಯಾಡ್ಜ್ ವಿತರಣೆ : ಅದರ ಬೆಲೆ ಎಷ್ಟು ಗೊತ್ತಾ..?

---Advertisement---

 

ಬೆಂಗಳೂರು: ರಾಜ್ಯ ಎಲ್ಲಾ ಶಾಸಕರು, ಸಚಿವರಿಗೆ ಇಂದು ಬ್ಯಾಡ್ಜ್ ವಿತರಣೆ ಮಾಡಲಾಗಿದೆ. ವಿಧಾನಸಭೆ ಸಚಿವಾಲಯದಿಂದ ರಾಜ್ಯದ 224 ಜನರಿಗೂ ಚಿನ್ನ ಲೇಪಿಯ, ಗಂಡುಬೇರುಂಡ ಬ್ಯಾಡ್ಜ್ ವಿತರಣೆ ಮಾಡಲಾಗಿದೆ. ಮುಂದಿನ ಅಧಿವೇಶನದಿಂದ ಎಲ್ಲಾ ಸದಸ್ಯರು ಈ ಬ್ಯಾಡ್ಜ್ ಧರಿಸಿಯೇ ಸದನಕ್ಕೆ ಹಾಜರಾಗಬೇಕು. ವಿಧಾನಸಭಡಗೆ ಬರುವವರೆಲ್ಲಾ ಶಾಸಕರ ರೀತಿಯೇ ಉಡುಪು ಧರಿಸಿ ಬರುತ್ತಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭೆಯಲ್ಲಿ ಎಲ್ಲಾ ಶಾಸಕರು ಬ್ಯಾಡ್ಜ್ ಧರಿಸಿ ಬರಬೇಕು ಎಂದು ಸ್ಪೀಕರ್ ಯು ಟಿ ಖಾದರ್ ಸೂಚನೆ ನೀಡಿದ್ದಾರೆ.

ಇನ್ನು ಈ ಬ್ಯಾಡ್ಜ್ ಗಳನ್ನು ಬೆಂಗಳೂರಿನ ಐ ಡ್ರೀಮ್ಸ್ ಟ್ರೆಂಡ್ ಅಂಡ್ ಈವೆಂಟ್ ಲಿಮಿಟೆಡ್ ಕಂಪನಿಯಿಂದ ತರಿಸಿಕೊಳ್ಳಲಾಗಿದೆ. ಒಂದೊಂದು ಚಿನ್ನ ಲೇಪಿತ ಬ್ಯಾಡ್ಜ್ ಗೆ 2,832 ರೂಪಾಯಿ ಕೊಟ್ಟು ಖರೀದಿ ಮಾಡಲಾಗಿದೆ. ಬ್ಯಾಡ್ಜ್ ಧರಿಸಲೇಬೇಕೆಂದಿರುವ ಯು ಟಿ ಖಾದರ್, ಎಲ್ಲಾ ಶಾಸಕರು ಬ್ಯಾಡ್ಜ್ ಧರಿಸಿದರೆ ಗಾರ್ಡ್ ಗಳಿಗೂ ಶಾಸಕರು ಯಾರೆಂಬುದನ್ನು ಕಂಡು ಹಿಡಿಯಲು ಅನುಕೂಲವಾಗುತ್ತದೆ. ಶಾಸಕರಿಗೆ ಒಂದೊಂದು ಕಿಟ್ ನೀಡಲಾಗಿದೆ. ಆ ಕಿಟ್ ನಲ್ಲಿ ಮೂರು ಚಿನ್ನ ಬೇರುಂಡ ಬ್ಯಾಡ್ಜ್ ಗಳನ್ನು ಇಡಲಾಗಿದೆ. ಒಂದು ಜಿಲ್ಲೆಗಳಲ್ಲಿ, ಇನ್ನೊಂದು ವಿಧಾನಸೌಧಕ್ಕೆ, ಮತ್ತೊಂದು ಪ್ರತಿದಿನದ ಬಳಕೆಗೆ ಸೂಚನೆ ನೀಡಲಾಗಿದೆ. ದೇಶದ ಎಲ್ಲೆ ಕಾರ್ಯಕ್ರಮಕ್ಕೆ ಹೋದರೂ ಈ ಬ್ಯಾಡ್ಜ್ ಗಳನ್ನು ಧರಿಸಲು ಸೂಚನೆ ನೀಡಲಾಗಿದೆ.

 

ಸ್ಪೀಕರ್ ಯುಟಿ ಖಾದರ್ ಅವರು ಇತ್ತಿಚೆಗೆ ಆಸ್ಟ್ರೇಲಿಯಾ ಮೇಯರ್ ಇಬ್ಬರನ್ನು ಭೇಟಿ ಮಾಡಿದ್ದರಂತೆ. ಅವರು ತಮ್ಮ ಸರ್ಕಾರದ ಬ್ಯಾಡ್ಜ್ ಅನ್ನು ಧರಿಸಿದ್ದರಂತೆ‌. ಚುನಾಯಿತ ಸದಸ್ಯರಿಗೆ ಅಲ್ಲಿನ ಸರ್ಕಾರ ಗೌರವ ಸೂಚ್ಯಂಕವಾಗಿ ಬ್ಯಾಡ್ಜ್ ಗಳನ್ನು ನೀಡುತ್ತದೆಯಂತೆ. ಹೀಗಾಗಿ ಇಲ್ಲಿಯೂ ಆ ಯೋಜನೆ ಜಾರಿಗೆ ತಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...