ಸಿದ್ದರಾಮಯ್ಯ ಹೇಳಿದ್ದೆ ಫೈನಲ್‌ ಮಾಡುತ್ತಾ ಹೈಕಮಾಂಡ್..? : ಯತೀಂದ್ರ ಹೇಳಿದ್ದೇನು..?

suddionenews
1 Min Read

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಸದ್ಯ ತಮ್ಮ ಕ್ಷೇತ್ರವನ್ನು ಫೈನಲ್ ಮಾಡಿದ್ದಾರೆ. ಕೋಲಾರದಲ್ಲಿಯೇ ನಿಲ್ಲುತ್ತೇನೆ ಎಂದು ಹೇಳಿದ್ದಾರೆ. ಆದರೆ ಕೋಲಾರ ಸೇಫ್ ಪ್ಲೇಸ್ ಅಲ್ಲ ಅಂತ ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಈ ಬಾರಿ ಬಿಜೆಪಿಯನ್ನು ಮಟ್ಟ ಹಾಕಿ ಕಾಂಗ್ರೆಸ್ ಗೆಲ್ಲಬೇಕು, ನಾನು ಮುಖ್ಯಮಂತ್ರಿಯಾಗಬೇಕು ಎಂಬ ಆಕಾಂಕ್ಷೆಯನ್ನಿಟ್ಟುಕೊಂಡಿರುವ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ನಿಂತು ತಪ್ಪು ಮಾಡುತ್ತಿದ್ದಾರೆಂಬುದು ಹಲವರ ಅಭಿಪ್ರಾಯವಾಗಿದೆ.

ಸಿದ್ದರಾಮಯ್ಯ ಕೂಡ ಕೋಲಾರ ಜಿಲ್ಲೆಯ ಸಮೀಕ್ಷೆ ನಡೆಸಿದ್ದಾರೆ. ಎಲ್ಲವನ್ನು ಬದಿಗೊತ್ತಿ ಫೈನಲಿ ನಾನು ಕೋಲಾರದಲ್ಲಿಯೇ ನಿಲ್ಲುತ್ತೇನೆ ಎಂದು ಘೋಷಿಸಿದ್ದಾರೆ. ಹೈಕಮಾಂಡ್ ನಿಂದ ಇದಕ್ಕೆ ಅಧಿಕೃತವಾದ ಒಪ್ಪಿಗೆ ಬರಬೇಕಿದೆ. ಆದರೆ ಸಿದ್ದರಾಮಯ್ಯ ಅವರ ಮಗ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಅಪ್ಪನ ಬಗ್ಗೆ ಮಾತನಾಡಿದ್ದಾರೆ.

ಸಿದ್ದರಾಮಯ್ಯ ಅವರು ಕೋಲಾರದಲ್ಲಿ ನಿಲ್ಲುವುದು ಪಕ್ಕಾ ಆಗಿದೆ. ಅದಕ್ಕೆ‌ ಅಲ್ಲಿಯೇ ಮನೆ ಕೂಡ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ, “ಅಪ್ಪನಿಗೆ ವರುಣಾ ಕ್ಷೇತ್ರದಲ್ಲಿಯೇ ನಿಲ್ಲಲು ಹೇಳಿದ್ದೆ. ಆದ್ರೆ ಅವರು ಕೋಲಾರದಲ್ಲಿಯೇ ನಿಲ್ಲುತ್ತೇನೆ ಎಂದಿದ್ದಾರೆ. ಅಪ್ಪನ ವಿರುದ್ಧವಾಗಿ ಹೈಕಮಾಂಡ್ ಕೂಡ ಹೋಗಲ್ಲ” ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *