ರಾಜಕೀಯ ಮರುಪ್ರವೇಶಕ್ಕಾಗಿ ಬಳ್ಳಾರಿಗೆ ಬಂದಿಲ್ಲ : ಏನಿದು ಜನಾರ್ದನ ರೆಡ್ಡಿ ಮಾತು..?

suddionenews
1 Min Read

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲೇ ವಾಸವಿದ್ದು, ರಾಜಕೀಯ ಮರುಪ್ರವೇಶಕ್ಕೆ ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿತ್ತು. ಅಷ್ಟೇ ಅಲ್ಲದೇ ಆಪ್ತ ಸ್ನೇಹಿತ ಶ್ರೀರಾಮುಲು ಮೂಲಕ ರಾಜಕೀಯ ಮರುಪ್ರವೇಶಕ್ಕೆ ಫ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದ್ರೆ ಇದೀಗ ಆ ಬಗ್ಗೆ ಮಾಜಿ ಸಚಿವ ಜನಾರ್ದನ ರೆಡ್ಡಿಯವರೇ ಮಾತನಾಡಿದ್ದು, ನಾನು ಬಳ್ಳಾರಿಗೆ ಬಂದಿದ್ದು ರಾಜಕೀಯ ಮರುಪ್ರವೇಶದ ಉದ್ದೇಶಕ್ಕಲ್ಲ ಎಂದಿದ್ದಾರೆ.

ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಬಳ್ಳಾರಿಯಲ್ಲಿ ನಾನು ಸಾಮಾನ್ಯ ಜನರಲ್ಲಿ ಸಾಮಾನ್ಯನಂತೆ ಬದುಕೋದಕ್ಕೆ ಇಷ್ಟಪಡುತ್ತೇನೆ. ಯಾವುದೇ ರಾಜಕೀಯ ಪದವಿಗೋಸ್ಕರ ಹೋರಾಡಿ ಬದುಕೋದಕ್ಕೆ ನಾನು ಇಷ್ಟಪಡಲ್ಲ. ರಾಜಕೀಯ ಅನ್ನೋದು ನಮ್ಮ ವ್ಯಕ್ತಿಗತ ಕಣಕಣದಲ್ಲಿ ಇದ್ದೇ ಇದೆ.

ಅದಕ್ಕಾಗಿ ವಿಶೇಷವಾದ ಪ್ರವೇಶದ ಅಗತ್ಯವಿಲ್ಲ. ನನ್ನನ್ನು ರಾಜಕೀಯದ ವಿಚಾರವಾಗಿ ಗಂಟು ಹಾಕಬೇಡಿ. ಸಾಮಾನ್ಯವಾಗಿ ಬದುಕೋದ್ರಲ್ಲಿ ತೃಪ್ತಿ ಇದೆ. ಯಾವ ಜಿಲ್ಲೆಗೆ ಕಾಲಿಟ್ಟರೂ ರೆಡ್ಡಿ ಬೇಕು ಅನ್ನೋ ಪರಿಸ್ಥಿತಿ ಇದೆ. ಆದ್ರೆ ಯಾವುದೇ ರಾಜಕೀಯ ಪ್ರವೇಶ ಮಾಡಿ ಲಾಬಿ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *