ಎಚ್ಡಿಕೆಗೆ ಯಾವ ಅಭಿಪ್ರಾಯವಾದರೂ ಇರಲಿ, ನನ್ನ ಕ್ಷೇತ್ರದ ಜನ ಹೇಳಿದಂಗೆ ಕೇಳ್ತೇನೆ : ಜಿಟಿಡಿ

suddionenews
1 Min Read

ಮೈಸೂರು: ಕ್ಷೇತ್ರದ ಜನ ಕರೆದಾಗ ನಾನು ಅಲ್ಲಿ ಭಾಗಿಯಾಗಲೇ ಬೇಕು. ಎಚ್ ಡಿ ಕುಮಾರಸ್ವಾಮಿ ಅವರಿಗೆ ಯಾವ ಅಭಿಪ್ರಾಯವಾದರು ಇರಲಿ. ನನ್ನ ನಿರ್ಧಾರ ಬದಲಾಗಲ್ಲ ಎಂದು ಜಿ ಟಿ ದೇವೇಗೌಡ ತಿಳಿಸಿದ್ದಾರೆ.

ಜಿ ಟಿ ದೇವೇಗೌಡ ಅವರನ್ನ ಮರಿ ದೇವೇಗೌಡ ಅಂತಾನೆ ಸಾಕಷ್ಟು ಜನ ಕರೀತಾರೆ. ಇದೇ ಮಾತನ್ನ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ. ಆದ್ರೆ ಈ ಮಧ್ಯೆ ಜಿ ಟಿ ದೇವೇಗೌಡ ಅವರು, ಜೆಡಿಎಸ್ ಬಿಡ್ತಾರೆ ಅನ್ನೋ ಮಾತು ಹರಿದಾಡಿದಾಗ ಪಕ್ಷದಲ್ಲಿ ಬೇಡ ಅಂತ ಕೂಡ ಹೇಳಲಾಗಿತ್ತು. ಕಾಂಗ್ರೆಸ್ ಸೇರಲು ಸಿದ್ಧತೆ ನಡೆದಿದೆ ಎಂಬ ಮಾತು ಕೇಳಿ ಬಂದಿತ್ತು.

ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ, ಅವರು ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ನನ್ನನ್ನ ಆಹ್ವಾನಿಸಿದ್ದಾರೆ.‌ ನನ್ನ ಕ್ಷೇತ್ರದ ಜನರು ಆಹ್ವಾನಿಸಿದಾಗ ನಾನು ಹೋಗಲೇ ಬೇಕಾಗುತ್ತದೆ. ಕಳೆದ ಬಾರಿ ಸಿಎಂ ಬೊಮ್ಮಾಯಿ ಅವರ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *