ಹಾಸನ : ಗಣೇಶೋತ್ಸವದ ಸಂಭ್ರಮದಲ್ಲಿ ಟ್ರಕ್ ಚಕ್ರ ಹರಿದು ಸಾವನ್ನಪ್ಪಿದವರಲ್ಲಿ ಹಾಸನದ ಗೋಕುಲ್ ಕೂಡ ಒಬ್ಬರು. ಮನೆಯಲ್ಲಿ ಕೂಲಿ ನಾಲಿ ಮಾಡಿ ಮಕ್ಕಳನ್ನ ಓದಿಸುತ್ತಿದ್ದರು. ಆದರೆ ಈಗ ಮಗನೇ ಇಲ್ಲದಂತಾಗಿದ್ದಾನೆ. ಇಂದು ದೇವೇಗೌಡ ಅವರು ತಮ್ಮ ಈ ಇಳಿವಯಸ್ಸಿನಲ್ಲೂ ಹಾಸನಕ್ಕೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಗೋಕುಲ್ ತಾಯಿ ಕಣ್ಣೀರು ಹಾಕಿದ್ದಾರೆ.
ಗೋಕುಲ್ ತಾಯಿಗೆ ದೇವೇಗೌಡರು ಸಮಾಧಾನ ಹೇಳಿದ್ದು, ಅವರ ಮಗಳು ಅಂದ್ರೆ ಗೋಕುಲ್ ತಂಗಿಯನ್ನು ಓದಿಸುವ ಸಂಪೂರ್ಣ ಜವಾಬ್ದಾರಿ ನಮಗೆ ಬಿಡಿ. ಅವಳು ಎಷ್ಟು ಓದುತ್ತಾಳೋ ಅದರ ಆರ್ಥಿಕ ಜವಾಬ್ದಾರಿ ನಮ್ಮದು. ಕೇವಲ 10 ಗುಂಟೆ ಜಾಗದಲ್ಲಿ ಏನು ಮಾಡುವುದಕ್ಕೆ ಆಗುತ್ತೆ. ಪರಿಹಾರದ ಹಣವನ್ನ ಡೆಪಾಸಿಟ್ ಇಟ್ಟುಕೊಳ್ಳಿ ಎಂದು ಧೈರ್ಯ ಹೇಳಿದ್ದಾರೆ.
ಕುಟುಂಬಕ್ಕೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದ ದೇವೇಗೌಡ ಅವರು, ಪಕ್ಷದ ವತಿಯಿಂದ ಮೃತರ ಕುಟುಂಬಸ್ಥರಿಗೆ ಒಂದು ಲಕ್ಷ ಪರಿಹಾರ ನೀಡ್ತೀನಿ. ದೊಡ್ಡ ಗಾಯಾಳುಗಳಿಗೆ 25 ಸಾವಿರ, ಮಧ್ಯಮ ಗಾಯಾಳುಗಳಿಗೆ 20 ಸಾವಿರ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ 15 ಸಾವಿರ ಕೊಡುವುದಾಗಿ ತಿಳಿಸಿದ್ದಾರಡ.
ಈಗಾಗಲೇ ಸರ್ಕಾರಕ್ಕೂ ಪರಿಹಾರದ ಮೊತ್ತ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ದೇವೇಗೌಡರ ಮುಂದೆ ತನ್ನ ನೋವು ಹೇಳಿಕೊಂಡು ಗೋಕುಲ್ ತಾಯಿ ಗಾಯತ್ರಿ, ನನ್ನ ಮಗನನ್ನ ಕೂಲಿ ಮಾಡಿ ಓಡಿಸುತ್ತಿದ್ದೆ. ಮೃತ ಈಶ್ವರ ಹಾಗೂ ನನ್ನ ಮಗ ಗೋಕುಲ್ ಯಾವಾಗಲೂ ಜೊತೆಯಾಗಿಯೇ ಇರ್ತಾ ಇದ್ರು. ಈಗ ಸಾವಿನಲ್ಲೂ ಜೊತೆಯಾಗಿದ್ದಾರೆ. ಮಗನನ್ನ ಕಳೆದುಕೊಂಡ ನನಗೆ ಇನ್ಯಾರು ಗತಿ ಎಂದು ನೋವು ಪಟ್ಟಿದ್ದಾರೆ.


