Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಣತೆ : ಕೆ.ನಿರ್ಮಲಾ ಮರಡಿಹಳ್ಳಿ ಅವರ ದೀಪಾವಳಿ ಕವನ

Facebook
Twitter
Telegram
WhatsApp

 

ತಣ್ಣಗೆ ಕುಳಿತ ಹಣತೆ
ಮತ್ತೇನನ್ನೂ ಯೋಚಿಸಲಿಲ್ಲ
ನಿಲ್ಲುವಷ್ಟು ಬೆಳಕ
ಹರಿಸುವುದ ಬಿಟ್ಟು

ಸಣ್ಣ ಮುಗುಳ್ನಗೆಯಲ್ಲೇ
ಭೀಕರ ಕತ್ತಲೆಯ
ಮೀರಿ ಚಾಚಿತು
ಮೆದುವಾದ ಬೆಳಕ ಕುಡಿಯು

ಅತ್ತಿತ್ತ ಹೊರಳಾಡಿಸಿ ತನ್ನ
ಕಣ್ಣ ಬಯಸಿದವರಿಗೆ
ಹಿಡಿ ಸಂತಸವ ನೀಡಿ
ಮರೆಮಾಚಿತು ಸುಡುವ ಕರುಕ

ಕಾಣದ ಕೈಯೊಡನೆ
ಆರದೆಯೆ ಉರಿಯಿತು
ನೊಂದ ಭಾವಗಳಿಗೆ
ಭರವಸೆಯ ಜೊತೆಗೆ

ದೀಪದ ದೇಹದಲಿ
ಬೆರೆತೊಂದಾಗಿದೆ ಆತ್ಮ
ಸುಳಿದಾಡುತಿದೆ ಸಕಾರಾತ್ಮಕ ತೇಜ
ಉನ್ನತೋನ್ನತಿಗೇರಲಿ ಸಮಾಜ

ಬೆಳಕಿನ ಹಾರೈಕೆ
ಅನಂತತೆಯ ರೂಪ
ಬದುಕಿನೊಂದಿಗೆ ಸಾಗಲಿ
ಹೊಂಬೆಳಕ ನೋಟ

ಹಬ್ಬುತಲಿ ಹಣತೆಗಳ ಸಾಲು
ತಬ್ಬುತಲಿ ದಿವ್ಯ ಪ್ರಕಾಶನ
ಆತ್ಮ ಆತ್ಮಗಳಲಿ
ಬೆಳಕಾಗಲಿ ದೀಪಾವಳಿ


 ಕೆ.ನಿರ್ಮಲಾ ಮರಡಿಹಳ್ಳಿ, ಚಿತ್ರದುರ್ಗ
ಮೊ.ನಂ: 9901527137

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ಉದ್ಯೋಗದಲ್ಲಿ ತೊಂದರೆಗಳು ಕಾಣಲಿವೆ

ಈ ರಾಶಿಯವರ ಉದ್ಯೋಗದಲ್ಲಿ ತೊಂದರೆಗಳು ಕಾಣಲಿವೆ, ಈ ಪಂಚರಾಶಿಗಳ ಸಂಸಾರದಲ್ಲಿ ಅಲ್ಲೋಲಕಲ್ಲೋಲ! ಶನಿವಾರ ರಾಶಿ ಭವಿಷ್ಯ -ಸೆಪ್ಟೆಂಬರ್-21,2024 ಸೂರ್ಯೋದಯ: 06:08, ಸೂರ್ಯಾಸ್ತ : 06:09 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ

ಶ್ವಾಸ ಇರುವವರೆಗೂ ವಿಶ್ವಾಸ ಕಳೆದುಕೊಳ್ಳಬೇಡಿ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    ಸುದ್ದಿಒನ್ : ಶ್ವಾಸ ಇರುವವರಿಗೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಮಾಲ್ಡೀವ್ಸ್ ದೇಶದ ವಿಲ್ಲಾ ನೌಟೀಕ ಪ್ಯಾರಡೇಸ್ ದ್ವೀಪದಲ್ಲಿ ಶುಕ್ರವಾರ ನಡೆದ ವಿಶ್ವ

ಡಿ.ಕೆಂಪಣ್ಣನವರು ತಮ್ಮ ಜೀವಿತಾವಧಿಯ ಕೊನೆಯವರೆಗೂ ಭ್ರಷ್ಠಾಚಾರದ ವಿರುದ್ಧ ಹೋರಾಡಿದರು : ಕೆ.ಮಲ್ಲೇಶಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರ ನಿಧನಕ್ಕೆ ಜಿಲ್ಲಾ ಗುತ್ತಿಗೆದಾರರ ಸಂಘದಿಂದ

error: Content is protected !!