Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೈಸೂರಿನಲ್ಲಿ ನಾಲ್ವರ ಸಾವು ಪ್ರಕರಣ: ಎಲ್ಲರ ಕಿವಿ, ಬಾಯಿ, ಮೂಗಿನಲ್ಲಿ ರಕ್ತ ಸೋರಿಕೆ..!

Facebook
Twitter
Telegram
WhatsApp

ಮೈಸೂರು: ಮಲಗಿದ್ದಲ್ಲೇ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಪ್ರಕರಣವನ್ನು ಪೊಲೀಸ್ ಕಮಿಷನರ್ ತನಿಖೆ ನಡೆಸಿದ್ದಾರೆ. ಎಫ್ಎಸ್ಎಲ್ ಅಧಿಕಾರಿಗಳು ಕೂಡ ತನಿಖೆ ನಡೆಸಿದ್ದಾರೆ. ಗ್ಯಾಸ್ ಲೀಕೇಜ್ ನಿಂದಾನೇ ಈ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ.

ಮೃತ ಕುಮಾರಸ್ವಾಮಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರು. ಕಳೆದ 30 ವರ್ಷದಿಂದ ಮೈಸೂರು ಜಿಲ್ಲೆಯ ಯರಗನಹಳ್ಳಿಯಲ್ಲಿ ವಾಸವಾಗಿದ್ದಾರೆ. ಇವರು ವಾಸವಿದ್ದ ಮನೆ ತೀರಾ ಚಿಕ್ಕದು. 10 ಅಡಿ ಉದ್ದ 20 ಅಡಿ ಅಗಲದ ಮನೆ. ಈ ಮನೆಯಲ್ಲಿಯೇ ಮೂರು ಗ್ಯಾಸ್ ಸಿಲಿಂಡರ್ ಗಳನ್ನು ಇಟ್ಟುಕೊಂಡಿದ್ದರು. ಸಿಲಿಂಡರ್ ಸಹಾಯದಿಂದಾನೇ ಇಸ್ತ್ರಿ ಮಾಡುತ್ತಿದ್ದರು. ಮನೆಯಲ್ಲಿ ಎರಡೇ ಕಿಟಕಿ ಇದ್ದ ಕಾರಣ, ಗ್ಯಾಸ್ ಹೊರಗೆ ಹೋಗಲು ಆಗಿಲ್ಲ.

ತಂದೆ-ತಾಯಿ ರೂಮಲ್ಲಿ ಮಲಗಿದ್ದರೆ ಇಬ್ಬರು ಮಕ್ಕಳು ಹಾಲ್ ನಲ್ಲಿ ಮಲಗಿದ್ದರು. ಸಂಬಂಧಿಕರ ಮದುವೆಗೆಂದು ಚಿಕ್ಕಮಗಳೂರಿಗೆ ಹೋಗಿದ್ದವರು ಕಳೆದ ಸಂಜೆ ಮನೆಗೆ ಬಂದಿದ್ದಾರೆ. ಕಳೆದ ಸೋಮವಾರ ಮಲಗಿದ್ದವರು. ಅವರ ಸಂಬಂಧಿಕರು ಕರೆ ಮಾಡಿದರು ರೆಸ್ಪಾನ್ಸ್ ಇರಲಿಲ್ಲ. ಅಕ್ಕಪಕ್ಕದವರಿಗೆ ಕುಮಾರಸ್ವಾಮಿ ಇದ್ದಾರಾ ಎಂಬುದನ್ನು ನೋಡುವುದಕ್ಕೆ ಹೇಳಿದ್ದಾರೆ. ಬಾಗಿಲು ಬಡಿದಾಗ ಘಟನೆ ಬೆಳಕಿಗೆ ಬಂದಿದೆ.

ಎಲ್ಲರ ಕಿವಿ, ಮೂಗು ಮತ್ತು ಬಾಯಲ್ಲಿ ರಕ್ತ ಸೋರುತ್ತಾ ಇತ್ತು. ಗ್ಯಾಸ್ ಸ್ಮೆಲ್ ಕೂಡ ಬರುತ್ತಿತ್ತು. ಫೈರ್ ಡಿಪಾರ್ಟ್ಮೆಂಟ್, ಎಫ್ಎಸ್‌ಎಲ್ ತಂಡ ಬಂದು ಡೋರ್ ಓಪನ್ ಮಾಡಿದ್ದೇವೆ. ಆಗಲೂ ಗ್ಯಾಸ್ ಸ್ಮೆಲ್ ಬರ್ತಿತ್ತು. ಆಗ ಎಲ್ಲಾ ಡೋರ್ ಓಪನ್ ಮಾಡಿ ನಂತರ ಒಳ ಹೋಗಿ ನೋಡಿದ್ದೇವೆ. ಮನೆಯಲ್ಲಿ ಮೂರು ಗ್ಯಾಸ್ ಇತ್ತು ಮೇಲ್ನೋಟಕ್ಕೆ ಒಂದು ಸಿಲಿಂಡರ್ ಲೀಕ್ ಆಗಿದೆ ಎಂದು ಪೊಲೀಸ್ ಕಮಿಷನರ್ ರಮೇಶ್ ಬಾನೊತ್ ಮಾಹಿತಿ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Petrol, Diesel Prices: ವಾಹನ ಸವಾರರಿಗೆ ಶಾಕ್ :  ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ

ಸುದ್ದಿಒನ್, ಬೆಂಗಳೂರು : ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಈ ಹಿಂದೆ 100 ರೂಪಾಯಿಗಿಂತಲೂ ಹೆಚ್ಚಾಗಿದ್ದ ಪೆಟ್ರೋಲ್ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಚುನಾವಣೆಗೂ ಮೊದಲು ನಿರ್ಧಾರ ಕೈಗೊಂಡಿತ್ತು.

ಈ ರಾಶಿಯವರಿಗೆ ಏನು ಮುಟ್ಟಿದರು ಚಿನ್ನ, ಧನ ಲಾಭದ ಜೊತೆಗೆ ಸಾಲದಿಂದ ಮುಕ್ತಿ

ಈ ರಾಶಿಯವರಿಗೆ ಏನು ಮುಟ್ಟಿದರು ಚಿನ್ನ, ಧನ ಲಾಭದ ಜೊತೆಗೆ ಸಾಲದಿಂದ ಮುಕ್ತಿ, ಭಾನುವಾರ ರಾಶಿ ಭವಿಷ್ಯ -ಜೂನ್-16,2024 ಸೂರ್ಯೋದಯ: 05:46, ಸೂರ್ಯಾಸ್ತ : 06:47 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ

ನಿಮ್ಮ ಕಣ್ಣಿನಲ್ಲಿ ಚಿಕ್ಕ ವ್ಯತ್ಯಾಸ ಕಂಡುಬಂದರೂ ನಿರ್ಲಕ್ಷಿಸಬೇಡಿ : ಕ್ಯಾನ್ಸರ್ ರೋಗಲಕ್ಷಣಗಳಿರಬಹುದು…!

ಸುದ್ದಿಒನ್ : ಭಾರತ ಈಗ ಎದುರಿಸುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಯೆಂದರೆ ಅದು ಕ್ಯಾನ್ಸರ್. ಈ ಸಾಂಕ್ರಾಮಿಕ ರೋಗವು ವಯಸ್ಸಿನ ಭೇದವಿಲ್ಲದೆ ಜನರ ಮೇಲೆ ದಾಳಿ ಮಾಡುತ್ತಿದೆ. ಈಗ ಆಧುನಿಕ ಕಾಲದಲ್ಲಿಯೂ ಔಷಧ ಲಭ್ಯವಿದ್ದರೂ ಸಕಾಲದಲ್ಲಿ

error: Content is protected !!