ದಾವಣಗೆರೆ | ವೃದ್ಧ ದಂಪತಿಯ ಭೀಕರ ಕೊಲೆ

suddionenews
1 Min Read

ದಾವಣಗೆರೆ, (ಜ.24): ಮಾರಕಾಸ್ತ್ರಗಳಿಂದ ಕೊಚ್ಚಿ ವೃದ್ಧ ದಂಪತಿಗಳ ಭೀಕರ ಕೊಲೆ ಮಾಡಿರುವ ಘಟನೆ ತಾಲೂಕಿನ ಎಲೆಬೇತೂರ ಗ್ರಾಮದಲ್ಲಿ ನಡೆದಿದೆ. ಗುರುಸಿದ್ದಯ್ಯ (80), ಸರೋಜಮ್ಮ (75) ಕೊಲೆಯಾದ ವೃದ್ಧ ದಂಪತಿ.

ದುಷ್ಕರ್ಮಿಗಳು ತಡರಾತ್ರಿ ಮನೆಗೆ ನುಗ್ಗಿ‌ ಕೊಲೆ ಮಾಡಿದ್ದಾರೆ. 3 ಹೆಣ್ಣು ಮಕ್ಕಳನ್ನ ಮದ್ವೆ ಮಾಡಿ ಕೊಟ್ಟ ಬಳಿಕ ಮನೆಯಲ್ಲಿ ಪತಿ‌-ಪತ್ನಿ ಇಬ್ಬರೇ ವಾಸವಿದ್ದರು. ರಾತ್ರಿ ಮನೆಗೆ ನುಗ್ಗಿ ಕೊಲೆ ಮಾಡಿ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾರೆ. ಪಕ್ಕದ ಮನೆಯವರು ಬೆಳಗ್ಗೆ ಸರೋಜಮ್ಮ ಅವರನ್ನ ಭೇಟಿ ಮಾಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞ ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಶ್ವಾನದಳ ವೃದ್ಧ ದಂಪತಿಯ ಮೊಮ್ಮಗನ ಮೇಲೆ ಸಂಶಯ ವ್ಯಕ್ತಪಡಿಸಿದೆ. ಸ್ನಿಫರ್ ಡಾಗ್ ತುಂಗಾ ಘಟನೆ ನಡೆದ ಸ್ಥಳದಲ್ಲಿದ್ದ ಮೊಮ್ಮಗನ ಬಳಿ ನಿಂತುಕೊಂಡಿದೆ. ಈ ಹಿನ್ನೆಲೆ ಪೊಲೀಸರು ಮೊಮ್ಮಗನನ್ನು ವಶಕ್ಕೆ ಪಡೆದಿದ್ದಾರೆ.

ನಂತರ, 2 ಕಿ.ಮೀ ದೂರದ ಬಸಾಪುರ ಗ್ರಾಮದ ಮಗಳ ಮನೆ ಮುಂದೆ ಹೋಗಿ ಶ್ವಾನ ನಿಂತಿದ್ದು,  ದಾವಣಗೆರೆ ಗ್ರಾಮಾಂತರ ಪೊಲೀಸರಿಂದ ತನಿಖೆ ತೀವ್ರಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *