ದಾವಣಗೆರೆ : ಸೆಪ್ಟೆಂಬರ್ 24 ರಂದು ಗುರುಸಿದ್ದಾಪುರದಲ್ಲಿ ಶ್ರೀ ಚೌಡೇಶ್ವರಿ ದೇವಿಯ ದಸರಾ ಉತ್ಸವ ಕಾರ್ಯಕ್ರಮ

1 Min Read

 

ಸುದ್ದಿಒನ್, ದಾವಣಗೆರೆ, ಸೆಪ್ಟೆಂಬರ್. 21 : ಜಿಲ್ಲೆಯ ಜಗಳೂರು ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಸೆಪ್ಟೆಂಬರ್ 24 ರಂದು ಶ್ರೀ ಚೌಡೇಶ್ವರಿ ದೇವಿಯ ದಸರಾ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ 10-00 ಗಂಟೆಗೆ ಬನ್ನಿ ತರುವ ಕಾರ್ಯಕ್ರಮ ಇರುವುದು. ನಂತರ ಮಧ್ಯಾಹ್ನ 3-00 ಗಂಟೆಗೆ ಶ್ರೀ ದೇವಿಯು ಪಲ್ಲಕ್ಕಿಯಲ್ಲಿ ಭವ್ಯ ಪುಷ್ಪ ಅಲಂಕಾರದೊಂದಿಗೆ ಬನ್ನಿ ಮಂಟಪಕ್ಕೆ ಮೆರವಣಿಗೆ ಮೂಲಕ ಹೋಗಿ ಅಂಬು ಮುಡಿಯುವುದು. ರಾತ್ರಿ 8-00 ಗಂಟೆಗೆ ದೇವಿಯನ್ನು ಗ್ರಾಮಕ್ಕೆ ಕರೆಯಲಾಗುವುದು.

ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ
ಬಿ. ದೇವೇಂದ್ರಪ್ಪ ಶಾಸಕರು ಜಗಳೂರು, ಎಸ್.ವಿ ರಾಮಚಂದ್ರಪ್ಪ ಮಾಜಿ ಶಾಸಕರು, ಹೆಚ್.ಪಿ ರಾಜೇಶ್ ಮಾಜಿ ಶಾಸಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವು ಬಹು ವಿಜೃಂಭಣೆಯಿಂದ ಈ ದಸರಾ ಉತ್ಸವ ನಡೆಯಲಿದ್ದು, ಭಕ್ತಾಧಿಗಳು ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿಯವರು ಪ್ರಕಟಣೆಯಲ್ಲಿ ವಿನಂತಿ.

Share This Article