ದಾವಣಗೆರೆಯಲ್ಲಿ ಅಮಾನವೀಯ ಘಟನೆ : ಮೆಸೇಜ್ ವಿಚಾರಕ್ಕೆ ದಲಿತ ಯುವಕನ ಮೇಲೆ ಹಲ್ಲೆ..!

1 Min Read

 

ದಾವಣಗೆರೆ: ಹುಡುಗಿಯೇ ಮೊದಲು ಮೆಸೇಜ್ ಮಾಡಿದ್ದರು, ಹುಡುಗಿಯ ಕಡೆಯವರು ದಲಿತ ಯುವಕನ ಮೇಲೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ, ಚಿತ್ರಹಿಂಸೆ ನೀಡಿ, ದಲಿತ ಯುವಕ ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ. 20 ವರ್ಷದ ಗಣೇಶ್ ಎಂಬಾತ ಹಲ್ಲೆಗೊಳಗಾಗಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಗ್ರಾಮ ಪಂಚಾಯತು ಸದಸ್ಯ ಬಾಬಣ್ಣ, ಅರ್ತೀಕ, ಹರೀಶ್ ಸೇರಿ 60 ಹೆಚ್ಚು ಜನ ಸೇರಿ ಗಣೇಶ್ ಎಂಬುವವನ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ ಗಣೇಶ್ ಮತ್ತು ಆತನ ತಾಯಿಯನ್ನು ಒಂದು ರಾತ್ರಿ ಎರಡು ಹಗಲು ಕಲ್ಯಾಣ ಮಂಟೊ ಒಂದರಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದಾರೆ. ಅರೆಬೆತ್ತಲೆ ಗೊಳಿಸಿ ಊರಲ್ಲೆಲ್ಲಾ ಮೆರವಣಿಗೆ ಮಾಡಿದ್ದಾರೆ.

ಈ ಸಂಬಂಧ ಹುಡುಗನ ಸಂಬಂಧಿಕರು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದಾಖಲಿಸಿ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಹುಡುಗನ ಮೊಬೈಲ್ ತಪಾಸಣೆ ಮಾಡಿದಾಗ ಹುಡುಗಿಯೇ ಮೊದಲು ಹಾಯ್ ಎಂದು ಮೆಸೇಜ್ ಮಾಡಿರುವುದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *