Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದತ್ತಪೀಠ ಕೇಸ್ ರೀ ಓಪನ್.. ಅಷ್ಟಕ್ಕೂ 2017ರಲ್ಲಿ ಆಗಿದ್ದೇನು..? ಎ1 ಆರೋಪಿಯ ರಿಯಾಕ್ಷನ್ ಏನು..?

Facebook
Twitter
Telegram
WhatsApp

ದತ್ತಪೀಠ ಹೋರಾಟಗಾರರಿಗೆ ನೀಡಿದ ಸಮನ್ಸ್ ವಿಚಾರ ಕೂಡ ಸಾಕಷ್ಟು ಸದ್ದು ಮಾಡುತ್ತಾ ಇದೆ. ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡಿರುವ ಸರ್ಕಾರ ಪೆಂಡಿಂಗ್ ಇರುವಂತ ಹಳೆಯ ಕೇಸ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸೂಚನೆ ನೀಡಲಾಗಿದೆ. ಗೃಹ ಇಲಾಖೆಯಿಂದ ಈ ಸೂಚನೆ ಬಂದಿದ್ದು, ಹಳೆ ಕೇಸ್ ಗಳನ್ನು ಕ್ಲಿಯರ್ ಮಾಡಿ ಎಂದು ಸೂಚನೆ ನೀಡಲಾಗಿತ್ತು.

2017ರಲ್ಲಿ ದತ್ತಪೀಠದಲ್ಲಿ ಆಗಿದ್ದೇನು..?

ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ವೇಳೆ ಗೋರಿಗಳು ಧ್ವಂಸವಾಗಿದ್ದವು. ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿದ್ದ ಗೋರಿಗಳು ದ್ವಂಸವಾಗಿದ್ದವು. 2017 ಡಿಸೆಂಬರ್ 3ರಂದು ನಡೆದ ಘಟನೆ ಇದಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ 14 ಜನ ಭಜರಂಗದಳ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಾಗಿತ್ತು. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಕೇಸದ ದಾಖಲು ಮಾಡಲಾಗಿತ್ತು. ಐಪಿಸಿ ಸೆಕ್ಷನ್ 143, 447, 427, 298, 504, 506, 114, 353 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಮೂರು ದಿನಗಳ ಕಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಯಾಗಿತ್ತು.

 

ಈ ಕೇಸಲ್ಲಿ ಎ1 ಆರೋಪಿಯಾಗಿದ್ದಂತ ತುಡ್ಕೂರು ಮಂಜು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಹಜವಾಗಿ ಹೋರಾಟ ಅಂತ ಬಂದಾಗ ಆಕ್ರೋಶಗೊಂಡ ಮಾಲಾಧಾರಿಗಳು ಅಲ್ಲಿಂದಂತ ಗೋರಿಗಳನ್ನು ಧ್ವಂಸ ಮಾಡಲಾಗಿತ್ತು. ಅದು ಪ್ರಕರಣ ಆಗಿತ್ತು. ಆಗ ಭಜರಂಗ ದಳದ ಜಿಲ್ಲಾ ಸಂಚಾಲಕನಾಗಿದ್ದೆ ನಾನು. ಆ ಕೇಸ್ ನಲ್ಲಿ ಎ1 ಮಾಡಿದ್ದರು. ನಾನು ಜೈಲಿಗೂ ಹೋಗಿ ಬಂದಿದೆ. ಜಾಮೀನು ಕೂಡ ತೆಗೆದುಕೊಂಡಿದ್ದೆ. ಬಿಜೆಪಿ ಸರ್ಕಾರ ಇದ್ದಾಗ ಆ ಕೇಸನ್ನು ಹಿಂಪಡೆದಿದೆ ಅಂತ ನಾವೂ ಭಾವಿಸಿದ್ದೆವು. ಆದರೆ ಈಗ ಸಮನ್ಸ್ ಜಾರಿಯಾಗಿದೆ. ಕೋರ್ಟ್ ಗೆ ಹಾಜರಾಗುತ್ತೀವಿ. ಆದರೆ ಹಳೆಯ ಕೇಸ್ ಗೆ ಈಗ ಮರುಜೀವ ತಂದಿರುವುದು ಆಶ್ಚರ್ಯವಾಗಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೇರಳದಲ್ಲೂ ಸಿದ್ದರಾಮಯ್ಯ ಕ್ರೇಜ್ : ಪ್ರಿಯಾಂಕ ಗಾಂಧಿ ಪರ ಪ್ರಚಾರದಲ್ಲಿ ಏನೆಲ್ಲಾ ಆಯ್ತು..?

ಸಿಎಂ ಸಿದ್ದರಾಮಯ್ಯ ಅಂದ್ರೆ ಕರ್ನಾಟಕದಲ್ಲಂತೂ ಸಿಕ್ಕಾಪಟ್ಟೆ ಕ್ರೇಜು. ಅಭಿಮಾನಿಗಳ ಬಳಗ ಕಡಿಮೆ ಏನು ಇಲ್ಲ. ಆದ್ರೆ ಸಿದ್ದರಾಮಯ್ಯ ಅವರಿಗೆ ನಮ್ಮ ರಾಜ್ಯದಲ್ಲಿ ಮಾತ್ರ ಅಭಿಮಾನಿಗಳು ಇರೋದಲ್ಲ, ಪಕ್ಕದ ರಾಜ್ಯದಲ್ಲೂ ಅಷ್ಟೇ ಅಭಿಮಾನಿಗಳಿದ್ದಾರೆ. ಕೇರಳದಲ್ಲೂ ಸಿಎಂ

ವಿಪರೀತ ಬೆನ್ನು ನೋವು : ಬೆಂಗಳೂರಿಗೆ ಶಿಫ್ಟ್ ಆಗಲಿದ್ದಾರಾ ದರ್ಶನ್..?

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದಾಸನಿಗೆ ಅನಾರೋಗ್ಯ ಬಿಡದೆ ಕಾಡುತ್ತಿದೆ. ಅದರಲ್ಲೂ ಬಳ್ಳಾರಿ ಜೈಲಿಗೆ ಹೋದಾಗಿನಿಂದ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಂಡಿದೆ. ಬೆನ್ನು ನೋವು ಎಂದು ಹೇಳಿದಾಗಿನಿಂದ ಜೈಲು ಅಧಿಕಾರಿಗಳು

ಡಾನಾ ಚಂಡಮಾರುತ ಎಫೆಕ್ಟ್ : ಹವಮಾನ ಇಲಾಖೆ ನೀಡಿದ ಎಚ್ಚರಿಕೆ ಏನು..?

ಎಲ್ಲೆಡೆ ಬೆಂಬಿಡದೆ ಮಳೆರಾಯ ಸುರಿಯುತ್ತಿದ್ದಾನೆ. ಕಳೆದ ಕೆಲವು ದಿನಗಳಿಂದ ವಿಶ್ರಾಂತಿಯನ್ನೇ ನೀಡುತ್ತಿಲ್ಲ. ಇದರಿಂದ ಜನರು ಕೂಡ ರೋಸೆದ್ದು ಹೋಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಹಾಗೂ ಒಡಿಶಾದಲ್ಲಿ ಶುರಿವಾಗಿರುವ ಚಂಡಮಾರುತದ ಪ್ರಭಾವವಾಗಿದೆ. ಚಂಡಮಾರುತ ತಗ್ಗುವ ತನಕವೂ ಈ

error: Content is protected !!