ಉಮಾಪತಿ ಎದುರಾಳಿಯ ಜೊತೆ ಕೈ ಜೋಡಿಸಿದ ದರ್ಶನ್ : ಸತೀಶ್ ರೆಡ್ಡಿ ಪರ ಪ್ರಚಾರ ಕಾರ್ಯ..!

suddionenews
1 Min Read

ಉಮಾಪತಿ ಮತ್ತು ದರ್ಶನ್ ಒಂದು ಕಾಲದ ಆಪ್ತ ಗೆಳೆಯರು. ಆದರೆ ಏನೋ ಆಗಿ ಇನ್ನೇನೋ ನಡೆದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ವಂಚನೆ ಕೇಸ್, ಮೈಸೂರು ಗೆಳೆಯರ ತನಕ ಹೋಗಿತ್ತು. ನಂತರ ನಡೆದ ಮೇಲೆ ಫ್ರೆಂಡ್ ಶಿಪ ಕಿತ್ತು ಹೋಯ್ತು. ಆದರೆ ಇದೀಗ ಮಾಜಿ ಗೆಳೆಯನ ವಿರುದ್ದ ಚುನಾವಣಾ ಅಖಾಡಕ್ಕೆ ಇಳಿಯಲು ದರ್ಶನ್ ಸಿದ್ದತೆ ನಡೆಸಿದ್ದಾರೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಸಿನಿಮಾ ನಿರ್ಮಾಣದ ಜೊತೆಗೆ ರಾಜಕೀಯ ಜೀವನ ಆರಂಭಿಸಲು ಎಲ್ಲಾ ಪ್ಲ್ಯಾನ್ ಮಾಡಿದ್ದಾರೆ. ಕಳೆದ ಬಾರಿಯೇ ಟಿಕೆಟ್ ಗಾಗಿ ಓಡಾಡಿದ್ದರು. ಆದರೆ ದಕ್ಕಿರಲಿಲ್ಲ. 2023ರ ಚುನಾವಣೆಯಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಳಿ ಮಾತುಕತೆಯನ್ನು ಮಾಡಿ ಆಗಿದೆ. ಈ ಬಾರಿ ಟಿಕೆಟ್ ಸಿಗುವುದು ಪಕ್ಕ ಆಗಿದೆ.

ಬೊಮ್ಮನಹಳ್ಳಿಯಲ್ಲಿ ಒಂದು ವೇಳೆ ಉಮಾಪತಿ ಶ್ರೀನಿವಾಸ್ ಸ್ಪರ್ಧೆ ಮಾಡಿದರೆ ಅವರ ಎದುರಾಳಿಯಾಗಿ ಬಿಜೆಪಿಯಿಂದ ಸತೀಶ್ ರೆಡ್ಡಿ ಸ್ಪರ್ಧೆ ಮಾಡಲಿದ್ದಾರೆ. ನಿನ್ನೆ ಸತೀಶ್ ರೆಡ್ಡಿ ಅವರ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆ ನಟ ದರ್ಶನ್ ಅವರ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ಜೊತೆಗೆ ಚುನಾವಣಾ ಪೂರ್ವವಾಗಿ ರೋಡ್ ಶೋ ಕೂಡ ನಡೆಸಿದರು. ಈ ಮೂಲಕ ಉಮಾಪತಿ ಶ್ರೀನಿವಾಸ್ ಎದುರಾಳಿಗೆ ಜೊತೆಯಾಗಿ ದರ್ಶನ್ ನಿಂತಿರುವುದು ಕಂಡು ಬಂದಿತು.

ದರ್ಶನ್ ಅವರಿಗೆ ಮೂರು ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಚುನಾವಣಾ ಪ್ರಚಾರ ಕಾರ್ಯದಲ್ಲಿ ಎಲ್ಲರಿಗೂ ಬೆಂಬಲವಾಗಿ ನಿಲ್ಲುತ್ತಾರೆ. ಹಾಗೆಯೇ ಸತೀಶ್ ರೆಡ್ಡಿಗೂ ಬೆಂಬಲ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *