ಪೊಲೀಸರ ದರ್ಪ, ದೌರ್ಜನ್ಯ ವಕೀಲರತ್ತವೂ ತಿರುಗಿದೆ : ಬಿವೈ ವಿಜಯೇಂದ್ರ ಕಿಡಿ

suddionenews
1 Min Read

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಮತ್ತೆ ಕಿಡಿಕಾರಿದ್ದಾರೆ. ಯುವ ವಕೀಲನ ಮೇಲೆ ನಡೆದಿರುವ ಪೊಲೀಸರ ದೌರ್ಜನ್ಯವನ್ನು ಖಂಡಿಸಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿರಂಕುಶ ಪ್ರಭುತ್ವ ಮೆರೆಯುತ್ತಿದೆ. ಅಮಾಯಕರು,ರೈತ ಹೋರಾಟಗಾರರು ಹಾಗೂ ರಾಷ್ಟ್ರ ಭಕ್ತ ಕಾರ್ಯಕರ್ತರ ಮೇಲೆ ನಡೆಯುತ್ತಿದ್ದ ಪೋಲಿಸ್ ದರ್ಪ, ದೌರ್ಜನ್ಯ ಇದೀಗ ವಕೀಲರತ್ತವೂ ತಿರುಗಿದೆ, ಚಿಕ್ಕಮಗಳೂರಿನಲ್ಲಿ ಯುವ ವಕೀಲ ಪ್ರೀತಂ ಅವರ ಮೇಲೆ ನಡೆದಿರುವ ಪೋಲಿಸರ ಅಮಾನುಷ ಹಲ್ಲೆ ಅತ್ಯಂತ ಖಂಡನೀಯ.

ಪೋಲಿಸರ ಎಲ್ಲೆಮೀರಿದ ಗೂಂಡಾ ವರ್ತನೆ ಗಮನಿಸಿದರೆ ಗೃಹ ಸಚಿವರು ಇಲಾಖೆಯ ಮೇಲೆ ನಿಯಂತ್ರಣ ಕಳೆದುಕೊಂಡಿರುವಂತೆ ಕಾಣುತ್ತಿದೆ.
ವಕೀಲರ ಮೇಲೆ ನಡೆದಿರುವ ಹಲ್ಲೆ ಪ್ರಕರಣವೂ ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ನಡೆದಿರುವ ಪೋಲಿಸ್ ದೌರ್ಜನ್ಯಗಳ ಕುರಿತು ಸರ್ಕಾರ ಈ ಕೂಡಲೇ ಗಂಭೀರ ಕ್ರಮ ತೆಗೆದುಕೊಂಡು ಪೋಲಿಸ್ ದಬ್ಬಾಳಿಕೆಗೆ ಅಂಕುಶ ಹಾಕದಿದ್ದರೆ @BJP4Karnataka ಕೈ ಕಟ್ಟಿ ಕೂರದು ಎಂದು ಎಚ್ಚರಿಸ ಬಯಸುತ್ತೇನೆ’ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *