ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ಡಿಸೆಂಬರ್. 28 : ಕಲ್ಟ್ ಚಿತ್ರದ ನಾಯಕ ನಟ ಜೈದ್ಖಾನ್ ಹಾಗೂ ತಂಡವರು ಡಿ.30 ರಂದು ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಅಂದು ಸಂಜೆ ಐದು ಗಂಟೆಗೆ ಕನಕ ವೃತ್ತದಲ್ಲಿ ಸ್ವಾಗತಿಸಿ ಬೈಕ್ರ್ಯಾಲಿ ಮೂಲಕ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣಕ್ಕೆ ಕರೆತರಲಾಗುವುದೆಂದು ರಾಜ್ಯ ವಕ್ಫ್ ಮಂಡಳಿ ಮಾಜಿ ಚೇರ್ಮನ್ ಕೆ.ಅನ್ವರ್ಪಾಷ ತಿಳಿಸಿದರು.
ಟೌನ್ ಕ್ಲಬ್ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಬಿ.ಝಡ್. ಜಮೀರ್ ಅಹಮದ್ಖಾನ್ರವರ ಪುತ್ರ ಜೈದ್ಖಾನ್ ನಟಿಸಿರುವ ಚಿತ್ರ ಜ.23 ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರ ತಂಡ ಡಿ.30 ರಂದು ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದು, ಮನೋರಂಜನಾ ಕಾರ್ಯಕ್ರಮವಿರುತ್ತದೆ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ ಹಿರಿಯೂರಿನ ಮಾರಿಕಣಿವೆ, ಚಿತ್ರದುರ್ಗದ ಬೆಟ್ಟದಲ್ಲಿ ಕಲ್ಟ್ ಚಿತ್ರದ ಚಿತ್ರೀಕರಣವಾಗಿದೆ. ಇಲ್ಲಿ ಯಾವುದೆ ಜಾತಿ ಭೇದವಿಲ್ಲ. ಕಲೆಗೆ ಪ್ರೋತ್ಸಾಹಿಸಲಾಗುವುದು. ಉತ್ತಮ ಅಭಿನಯವಿರುವವರಿಗೆ ಎಲ್ಲರ ಸಹಕಾರ ಮುಖ್ಯ ಎಂದು ಮನವಿ ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಮಾತನಾಡುತ್ತ ಕಲ್ಟ್ ಎಂದರೆ ಅನುರಾಗ ಪ್ರೇಮ. ಚಿತ್ರದುರ್ಗದಲ್ಲಿ ಶೂಟಿಂಗ್ ಮಾಡಿದರೆ ಚಿತ್ರ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆಯಿಂದ ಇಲ್ಲಿ ಚಿತ್ರೀಕರಣವಾಗಿದೆ ಎಂದರು.
ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ ಗೆಲುವಿನ ಸಂಕೇತ ಹಲಗೆ ಬಾರಿಸುವ ಮೂಲಕ ಡಿ.30 ರಂದು ನಟ ಜೈದ್ಖಾನ್ ಹಾಗೂ ತಂಡದವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಕಲಾವಿದರಿಗೆ ಚಿತ್ರದುರ್ಗದ ಜನ ಯಾವಾಗಲು ಪ್ರೋತ್ಸಾಹಿಸುತ್ತಾರೆ. ಅದೇ ರೀತಿ ಕಲ್ಟ್ ಚಿತ್ರದ ತಂಡದವರಿಗೂ ಪ್ರೋತ್ಸಾಹಿಸಿ ಚಿತ್ರದ ಯಶಸ್ವಿಗೆ ಕಾರಣರಾಗಬೇಕೆಂದು ವಿನಂತಿಸಿದರು.
ದಲಿತ ಮುಖಂಡ ಬಾಳೆಕಾಯಿ ಶ್ರೀನಿವಾಸ್ ಮಾತನಾಡುತ್ತ ಕಲ್ಟ್ ಚಿತ್ರದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ ಎಂದು ಕೋರಿದರು.
ಹನೀಸ್, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಕಿರಣ್ಕುಮಾರ್, ಕುಂಚಿಗನಹಾಳ್ ಮಹಾಲಿಂಗಪ್ಪ, ರಾಜಣ್ಣ, ಲಕ್ಷ್ಮಿನಾರಾಯಣ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.













