ಹೌದೋ ಹುಲಿಯಾ ಎಂದ ಬಿಜೆಪಿ ಕಾರ್ಯಕರ್ತರು.. ಹುಲಿಯಾ ಅಲ್ಲ ಡ್ಯಾಶ್ ಡ್ಯಾಶ್ ಖಾನ್ ಎಂದ ಸಿಟಿ ರವಿ..!

suddionenews
1 Min Read

ವಿಜಯಪುರ: ಸಿದ್ದರಾಮಯ್ಯ ಅವರ ಹೆಸರು ಕೇಳಿದರೇನೆ ಸಿಟಿ ರವಿಗೆ ಕೋಪ ಹತ್ತಿಕೊಳ್ಳುತ್ತೆ. ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯ ಹೆಸರೆತ್ತಿ ಕೆಂಡಕಾರುತ್ತಲೇ ಇರುತ್ತಾರೆ. ಆದ್ರೆ ಇವತ್ತು ಅವರದ್ದೇ ಕಾರ್ಯಕ್ರಮದಲ್ಲಿ, ಅದರಲ್ಲೂ ಬಿಜೆಪಿ ಕಾರ್ಯಕರ್ತರೇ ಹೌದು ಹುಲಿಯಾ ಎಂದು ಘೋಷಣೆ ಕೂಗಿದ್ದಾರೆ. ಇದನ್ನು ಕೇಳಿಸಿಕೊಂಡ ಸಿಟಿ ರವಿ ತಕ಼್ ತಮ್ಮ ಭಾಷಣದ ಡೈಲಾಗ್ ಚೆಂಜ್ ಮಾಡಿಕೊಂಡಿದ್ದಾರೆ.

ಇಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆದಿದೆ. ಈ ವೇಳೆ ಸಿಟಿ ರವಿ ಅವರು ಭಾಷಣ ಮಾಡ್ತಾ ಇದ್ರು. ಈ ವೇಳೆ ನಿಡಗುಂದಿ ಪಟ್ಟಣದಲ್ಲಿ ರೋಡ್ ಶೋ ಕೂಡ ನಡೆದಿದೆ. ರೋಡ್ ಶೋ ನಲ್ಲಿ ಮಾತನಾಡಿದ ಸಿಟಿ ರವಿ, ಸಿದ್ರಾಮಣ್ಣ ಕಾಂಗ್ರೆಸ್ ಪಾರ್ಟಿ ಎಂದಿದ್ದಾರೆ. ಆಗ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಹೌದು ಹುಲಿಯಾ ಎಂದಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಸಿಟಿ ರವಿ, ಹೌದೋ ಹುಲಿಯಾ ಅಲ್ಲ.. ಡ್ಯಾಶ್.. ಡ್ಯಾಶ್.. ಖಾನ್ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸಮಾವೇಶದಲ್ಲಿ ಭಾಷಣ ಮಾಡುವಾಗ ಕಾರ್ಯಕರ್ತನೊಬ್ಬ ಹೌದೋ ಹುಲಿಯಾ ಎಂದು ಕೂಗಿದ್ದಷ್ಟೇ, ಅವತ್ತಿಂದ ಈ ಹೌದೋ ಹುಲಿಯಾ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗೋಗಿತ್ತು.

Share This Article
Leave a Comment

Leave a Reply

Your email address will not be published. Required fields are marked *