ಖಾಸಗಿ ಕಂಪನಿ ಎಂಡಿ ಕೊಲೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿಟಿ ರವಿ..!

suddionenews
1 Min Read

ಬೆಂಗಳೂರು: ನಿನ್ನೆ ಮಧ್ಯಾಹ್ನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಜೋಡಿ ಕೊಲೆ ನಡೆದಿದೆ. ಈ ಕೊಲೆ ಸಂಬಂಧ ಇದೀಗ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದಲ್ಲಿ ಯಾಕೆ ರಾಷ್ಟ್ರೀಯವಾದಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದರ ಹಿಂದೆ ಏನೋ ಪಿತೂರಿ ಇದೆ ಎಂಬ ಸಂಶಯ ಮೂಡುತ್ತಿದೆ. ಕರ್ನಾಟಕದಲ್ಲಿ ಸರಣಿ ಕೊಲೆಗಳು ನಡಿತಿರೋದು ದುರಾದೃಷ್ಟಕರ. ನಿನ್ನೆ ಫಣೀಂದ್ರ ಹಾಗೂ ವಿನು ಇಬ್ಬರ ಕೊಲೆ ಮಾಡಲಾಗಿದೆ. ರಾಷ್ಟ್ರೀಯ ಚಿಂತನೆಯಲ್ಲಿರುವ ಸರಣಿ ಸಾವಿನಿಂದ ಸಂಶಯಗಳು ಮೂಡಿವೆ. ಸರ್ಕಾರ ಸತ್ತಿದೆಯೋ..? ಬದುಕಿದ್ದೆಯೋ..? ಗೊತ್ತಿಲ್ಲ ಎಂದಿದ್ದಾರೆ.

ಸರ್ಕಾರ ಉತ್ತರ ಪ್ರದೇಶದ ಮಾದರಿಯಲ್ಲಿಯೇ ಕ್ರಮ ಅನುಅರಿಸಬೇಕಿತ್ತು. ಆರೋಪಿಗಳು ಭಯವಿಲ್ಲದೆ ಓಡಾಡುತ್ತಿದ್ದಾರೆ. ಈ ಕೊಲೆಗಳನ್ನು ಮೇಲ್ನೋಟಕ್ಕೆ ನೋಡುತ್ತಿದ್ದರೆ ವೈಯಕ್ತಿಕ ಅನ್ನಿಸುತ್ತೆ. ಆದ್ರೆ ಇವರೆಲ್ಲರೂ ರಾಷ್ಟ್ರೀಯ ಚಿಂತನೆಗಳಲ್ಲಿ ಗುರುತಿಸಿಕೊಂಡ ಜನ ಎಂದು ಸಿಟಿ ರವಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *