ಬೆಳೆಹಾನಿ: ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ರೂ.99.23 ಕೋಟಿ ಬೆಳೆ ಪರಿಹಾರ ವಿತರಣೆ

1 Min Read

 

ಮಾಹಿತಿ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಅಕ್ಟೋಬರ್ 21): ಜಿಲ್ಲೆಯಲ್ಲಿ 2022-23ನೇ ಸಾಲಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ಮಾಹೆಗಳಲ್ಲಿ (ಮುಂಗಾರು ಹಂಗಾಮಿನಲ್ಲಿ) ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ ಬೆಳೆಹಾನಿ ಆಗಿದ್ದು, ಬೆಳೆ ಹಾನಿಯ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕಾರ್ಯ ಮುಗಿಸಿದ್ದು, ಜಿಲ್ಲೆಯಾದ್ಯಂತ ಒಟ್ಟು 71158.47 ಹೆಕ್ಟೇರ್‍ಗಳಷ್ಟು ಕೃಷಿ ಬೆಳೆ ಹಾನಿಯಾಗಿರುವುದು ವರದಿಯಾಗಿದೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 15 ರವರೆಗೆ 5 ಹಂತದಲ್ಲಿ ಚಿತ್ರದುರ್ಗ ಜಿಲ್ಲೆಯ,

ಚಿತ್ರದುರ್ಗ ತಾಲ್ಲೂಕಿನ 23,778 ರೈತ ಫಲಾನುಭವಿಗಳ ಖಾತೆಗಳಿಗೆ ರೂ. 34.54 ಕೋಟಿ,

ಚಳ್ಳಕೆರೆ ತಾಲ್ಲೂಕಿನ 1569 ರೈತ ಫಲಾನುಭವಿಗಳ ಖಾತೆಗಳಿಗೆ ರೂ. 3.52 ಕೋಟಿ,

ಮೊಳಕಾಲ್ಮೂರು ತಾಲ್ಲೂಕಿನ 501 ರೈತ ಫಲಾನುಭವಿಗಳ ಖಾತೆಗಳಿಗೆ ರೂ.0.74 ಕೋಟಿ,

ಹಿರಿಯೂರು ತಾಲ್ಲೂಕಿನ 19619 ರೈತ ಫಲಾನುಭವಿಗಳ ಖಾತೆಗಳಿಗೆ ರೂ.28.95 ಕೋಟಿ,

ಹೊಳಲ್ಕೆರೆ ತಾಲ್ಲೂಕಿನ 21745 ರೈತ ಫಲಾನುಭವಿಗಳ ಖಾತೆಗಳಿಗೆ ರೂ.26.57 ಕೋಟಿ ಹಾಗೂ

ಹೊಸದುರ್ಗ ತಾಲ್ಲೂಕಿನ 6408 ರೈತ ಫಲಾನುಭವಿಗಳ ಖಾತೆಗಳಿಗೆ ರೂ.4.98 ಕೋಟಿ ಸೇರಿದಂತೆ ಜಿಲ್ಲೆಯಿಂದ ಒಟ್ಟು 99.23 ಕೋಟಿಗಳಷ್ಟು ಬೆಳೆ ಪರಿಹಾರದ ಮೊತ್ತ ನೇರ ನಗದು ವರ್ಗಾವಣೆ ಮುಖಾತರ ಜಮೆಯಾಗಿರುತ್ತದೆ.

ಉಳಿದ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಮುಂದುವರೆದು ಅಕ್ಟೋಬರ್ ಮಾಹೆಯಲ್ಲಿ (ಹಿಂಗಾರು ಹಂಗಾಮಿನಲ್ಲಿ) ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯಿಂದ ಒಟ್ಟು 49,162.20 ಹೆಕ್ಟೇರಷ್ಟು ಕೃಷಿ ಬೆಳೆ ಹಾನಿಯಾಗಿರುವುದರ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *