ಕೊರೊನಾ ಅನ್ನೋದೊಂದು ಮೆಡಿಕಲ್ ಮಾಫಿಯಾ ಅಷ್ಟೇ : ಸಂಚಲನ ಸೃಷ್ಟಿಸಿದ ಅಗ್ನಿ ಶ್ರೀಧರ್ ಹೇಳಿಕೆ..!

suddionenews
1 Min Read

ಬೆಂಗಳೂರು: ಕೊರೊನಾ ಮೂರನೆ ಅಲೆಯ ಭಯ ಎಲ್ಲರನ್ನು ಕಾಡುತ್ತಿದೆ. ವೀಕೆಂಡ್ ಕರ್ಫ್ಯೂ, ಕೊರೊ‌ನಾ ಟಫ್ ರೂಲ್ಸ್ ನಂತ ರೂಲ್ಸ್ ಮಾಡಿ ಜನ ಈಗಾಗಲೇ ಸಂಕಷ್ಟಕ್ಕೀಡಾಗಿದ್ದಾರೆ. ಮತ್ತೆಲ್ಲಿ ಲಾಕ್ಡೌನ್ ಮಾಡ್ತಾರೋ ಎಂಬ ಭಯದಲ್ಲಿದ್ದಾರೆ. ಹೀಗಿರುವಾಗ ಬರಹಗಾರ ಅಗ್ನಿ ಶ್ರೀಧರ್ ನೀಡಿರುವ ಹೇಳಿಕೆಯತ್ತ ಎಲ್ಲರ ಗಮನ ಸೆಳೆದಿದೆ.

ಯಾವ ಕೊರೊನಾನೂ ಇಲ್ಲ. ಇದೊಂದು ಕೇವಲ ಮೆಡಿಕಲ್ ಮಾಫಿಯಾ ಅಷ್ಟೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಕೊರೊನಾ ಇದೆ ಎಂಬುದೇ ಸುಳ್ಳು. ನಾನು ಇದುವರೆಗೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಮ್ಮ ಕುಟುಂಬದವರು ಕೂಡ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಾನು ಇತ್ತೀಚೆಗೆ ಸಿದ್ದರಾಮಯ್ಯ ಅವರ ಎದುರಿಗೂ ಇದನ್ನೇ ಹೇಳಿದ್ದೇನೆ.

ರಾಜಕಾರಣಿಗಳು ತಳ ವರ್ಗದ ಜನರನ್ನು ಬದುಕಿರುವಾಗಲೇ ಸಾಯಿಸುತ್ತಿದ್ದಾರೆ. ಶೇಕಡ 60 ರಷ್ಟು ವೈದ್ಯರು ಕೂಡ ಈ ಲಸಿಕೆ ಪಡೆದಿಲ್ಲ. ಈ ಬಗ್ಗೆ ನನಗೆ ಗೊತ್ತಿದೆ. ಇದು ಫ್ಯಾಕ್ಟ್. ಯಾರು ಕೂಡ ಕೋವಿಡ್ ನಿಂದ ಸತ್ತಿಲ್ಲ. ಸತ್ತ ವ್ಯಕ್ತಿಯಲ್ಲಿ ನೂರಾರು ವೈರಸ್ ಇದೆ. ಆದ್ರೆ ಕೊರೊನಾವನ್ನ ಹೈಲೇಟ್ ಮಾಡಲಾಗಿದೆ ಎಂಬುದೇ ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

ಈ ಹಿಂದೆ ಕೂಡ ಸಾಕಷ್ಟು ಜನ ಈ ಬಗ್ಗೆ ಮಾತನಾಡಿದ್ದರು. ಕೊರೊನಾ ಅನ್ನೋದೆಲ್ಲಾ ಸುಳ್ಳು ಮೆಡಿಕಲ್ ಮಾಫಿಯಾದಿಂದ ಈ ಬಗ್ಗೆ ಹೆಚ್ಚು ಸೋಂಕಿತರು ಕಾಣಿಸಿತ್ತಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಇದೀಗ ಅಗ್ನಿ ಶ್ರೀಧರ್ ಕೂಡ ಅದನ್ನೇ ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *