Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮುಂದುವರೆದ ನಿರ್ಮಾಪಕ ವರ್ಸಸ್ ಕಿಚ್ಚನ ಜಟಾಪಟಿ : ರವಿಚಂದ್ರನ್ ಮಧ್ಯಸ್ಥಿಕೆ

Facebook
Twitter
Telegram
WhatsApp

 

ಫಿಲ್ಮ್ ಚೆಂಬರ್ ಮುಂದೆ ನಿರ್ಮಾಪಕ ಎಮ್ ಎನ್ ಕುಮಾರ್ ಅವರು ಎರಡನೇ ದಿನವೂ ಧರಣಿ ಮುಂದುವರೆಸಿದ್ದಾರೆ. ಅವರ ಧರಣಿಗೆ ಚಿತ್ರರಂಗದ ಹಲವರು ಸಾಥ್ ನೀಡಿದ್ದಾರೆ. ಈ ವಿಚಾರ ದೊಡ್ಡದಾಗುತ್ತಾ ಹೋಗುತ್ತಿರುವ ಕಾರಣ ಕ್ರೇಜಿ ಸ್ಟಾರ್ ರವಿಚಂದ್ರನ್ ಮಧ್ಯಸ್ಥಿಕೆ ವಹಿಸಿದ್ದಾರೆ. ನಿರ್ಮಾಪಕರನ್ನು ಕರೆದು ಮಾತನಾಡಲು ಮುಂದಾಗಿದ್ದಾರೆ.

ಇನ್ನು ಧರಣಿಯಲ್ಲಿ ಸುದೀಪ್ ಮ್ಯಾನೇಜರ್ ಆಗಿದ್ದಂತ ಯೋಗೀಶ್ ದ್ವಾರಕೀಶ್ ಅವರು ಕೂಡ ನಡೆದಿರುವುದು ಸತ್ಯ ಎಂದೇ ಹೇಳಿದ್ದಾರೆ. ಜೊತೆಗೆ ಫಿಲ್ಮ್ ಚೆಂಬರ್ ನ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಕಿವಿ ಮಾತು ಹೇಳಿದ್ದಾರೆ.

ಮಾತನಾಡಿದ ಸಾರಾ ಗೋವಿಂದು, ಒಂದೂವರೆ ತಿಂಗಳಿಂದ ಎಲ್ಲಾ ವಿದ್ಯಾಮಾನಗಳನ್ನ ನೋಡ್ತಾ ಇದ್ದೀನಿ. ಆರೋಗ್ಯ ಸರಿಯಿಲ್ಲದ ಕಾರಣ ಮನೆಯಲ್ಲಿಯೇ ಇದ್ದೆ. ಆದ್ರೆ ಸಮಸ್ಯೆ ಬಗೆಹರಿಸಲೇ ಬೇಕಾಗಿದೆ ಇದು. ಸುದೀಪ್ ಬೇರೆ ಅಲ್ಲ, ನಿರ್ಮಾಪಕರು ಬೇರೆ ಅಲ್ಲ. ನನ್ನ ಕಾಲದಲ್ಲಿ ಸುಮಾರು ಸಾವಿರಾರು ಇಂತ ಸಮಸ್ಯೆ ಬಗೆಹರಿಸಿದ್ದೇವೆ.

ರನ್ನ ಚಿತ್ರ ಬಿಡುಗಡೆಯಾದಂತ ಸಂದರ್ಭದಲ್ಲಿ ನಡೆದ ಘಟನೆ ಇದು. ಕುಮಾರ್ ಅವರಿಗೆ ನಿರ್ಮಾಪಕರು ಹಣ ಕೊಡಬೇಕಾಗಿತ್ತು. ಸುದೀಪ್ ಅವರ ಬಳಿ ಕುಮಾರ್ ಕೇಳಿದ್ದರು. ಬಳಿಕ ಸುದೀಪ್ ಅವರೇ ಆ ಸಮಯದಲ್ಲಿ ವಾಣಿಜ್ಯ ಮಂಡಳಿಗೆ ಬಂದಿದ್ದರು. 2 ಕೋಟಿ 35 ಲಕ್ಷ ಹಣವನ್ನು ಕೊಟ್ಟಿದ್ದಕ್ಕೆ ಸಾಕ್ಷಿ ನಾನಿದ್ದೀನಿ. ಎಲ್ಲಾ ನಿರ್ಮಾಪಕರಿಗೂ ಇದು ಗೊತ್ತಿರುವ ವಿಚಾರ. ಇಂಥ ಸಮಸ್ಯೆಗಳು ಬಂದಾಗ ಸಂಧಾನ ಸಮಿತಿ ಅಂತ ಮಾಡ್ತೀವಿ. ಆ ಸಮಿತಿಯಲ್ಲಿ 15 ರಿಂದ 18 ಜನ ಇರ್ತಾರೆ. ಶಿವರಾಜ್ ಕುಮಾರ್, ರವಿಚಂದ್ರನ್, ಉಮೇಶ್ ಬಣಕಾರ್, ಕೆ ಮಂಜು, ನಾಗಣ್ಣ, ಗಂಗಾಧರ್ ಹೀಗೆ ಸಾಕಷ್ಟು ಜನ ಸಮಿತಿಯಲ್ಲಿದ್ದಾರೆ. ಸುದೀಪ್ ಅವರು ಬೇಕಾದಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಫಿಲ್ಮ್‌ ಚೇಂಬರ್ ಗೆ ಅವರು ಬಂದಿದ್ದರೆ ಐದತ್ತು ನಿಮಿಷದಲ್ಲಿ ಸಮಸ್ಯೆ ಬಗೆಹರಿಯುತ್ತಿತ್ತು ಎಂದಿದ್ದಾರೆ.

 

ನೀವೂ ಬಂದು ಸಮಸ್ಯೆ ಬಗೆಹರಿಸಿಕೊಂಡಿದ್ದರೆ ನಮಗೂ ಸಂತೋಷ ಆಗ್ತಾ ಇತ್ತು. ಕುಮಾರ್ ಹೇಳುವುದು ಸುಳ್ಳು ಆಗಿದ್ರೆ ನೀವೂ ಅದನ್ನ ಇಲ್ಲಿ ಸಾಬೀತು ಮಾಡಿ. ಒಬ್ಬ ನಿರ್ಮಾಪಕನಿಗೆ 10 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದು ಒಳ್ಳೆಯದ್ದಲ್ಲ. ಸುದೀಪ್ ಅವರು ಐದು ಕೋಟಿ ಕೊಡ್ತೀನಿ ಅಂದಿದ್ದಾರೆ. ನಿಮ್ಮ ನಿರ್ಮಾಪಕರೇ ಈ ಮಾತನ್ನು ಹೇಳಿದ್ದಾರೆ. ಐದು‌ ಕೋಟಿ ಕಡಿಮೆ ಹಣ ಅಲ್ಲ. ಯಾರು ಸುಮ್ಮ ಸುಮ್ಮನೆ ಆ ಹಣ ನೀಡುವುದಿಲ್ಲ. ತಮಿಳುನಾಡಿನಲ್ಲಿ ನಟರಿಗೆ ರೆಡ್ ಕಾರ್ಡ್ ಕೊಟ್ಟಿದ್ದಾರೆ. ನಾವ್ಯಾರು ಆ ರೀತಿ ಮಾಡಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!