4 ದಿನದಿಂದ ರಜೆಯಲ್ಲಿದ್ದ ಕಾನ್ಸ್ಟೇಬಲ್ ಇಂದು ಕಚೇರಿಯಲ್ಲೇ ಆತ್ಮಹತ್ಯೆ..!

suddionenews
1 Min Read

ಕಾರವಾರ: ಡಿಎಆರ್ ಕಚೇರಿಯಲ್ಲೇ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರವಾರದಲ್ಲಿ ನಡೆದಿದೆ. 35 ವರ್ಷದ ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡ ಕಾನ್ಸ್ಟೇಬಲ್. ಆದ್ರ ಆತ್ಮಹತ್ಯೆಗೆ ಕಾರಣವೆನೆಂಬುದು ಇನ್ನು ತಿಳಿದು ಬಂದಿಲ್ಲ.

ಗುರುಪ್ರಸಾದ್ ಇತ್ತೀಚೆಗಷ್ಟೇ ಹೊನ್ನಾವರದ ಹಳದೀಪುರಕ್ಕೆ ತೆರಳಿದ್ದರು. ಕಚೇರಿಗೆ ನಾಲ್ಕು ದಿನಗಳ ಕಾಲ ರಜೆ ಹಾಕಿದ್ದರು. ರಜೆ ಮುಗಿಸಿಕೊಂಡು ಇಂದು ಕಚೇರಿಗೆ ಬಂದ ಗುರುಪ್ರಸಾದ್ ಇದ್ದಕ್ಕಿದ್ದ ಹಾಗೇ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾರೆ. ಕ್ರೀಡಾ ಚಟುವಟಿಕೆಯಲ್ಲಿ ಹೆಚ್ಚು ಹೆಸರು ಗಳಿಸಿದ್ದ ಗುರುಪ್ರಸಾದ್, ಡಿಎಆರ್ ತರಬೇತಿ ಕಚೇರಿಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

ರಜೆಯಿಂದ ಬಂದವರು ಪೊಲೀಸ್ ನೌಕರರ ಸಂಘದ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕಕೆ ಹಿರಿಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *