ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎನ್ನಲಾಗ್ತಿದೆ. ಸಿದ್ದರಾಮಯ್ಯ ಅವರು ಈ ಸಂಬಂಧ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಇದೀಗ ಈ ಬಗ್ಗೆ ಡಿಕೆ ಶಿವಕುಮಾರ್ ಅವರಿಗೂ ಪ್ರಶ್ನೆ ಎದುರಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೇಲೆ ಹಾಕಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿಯವರು ಮಾಡುತ್ತಿರಬಹುದೇನೋ. ನಾನು ಈ ಬಗ್ಗೆ ಪರಿಶೀಲನೆ ಮಾಡ್ತೀನಿ. ಬಿಜೆಪಿಯವರೋ ದಳದವರೋ ಈ ರೀತಿ ಮಾಡ್ತಿರಬಹುದು, ಗೊತ್ತಿಲ್ಲ. ಕಾರವಾರಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗ್ತೀನಿ. ಅಲ್ಲಿ ಕೇಳ್ತೀನಿ ಎಂದಿದ್ದಾರೆ.
ಸದ್ಯ ಈಗ ಇರುವ ಕೆಲಸ ಮಾಡಿ, ರೋಡಿಗೆ ಟಾರ್ ಹಾಕುದ್ರೆ ಸಾಕಾಗಿದೆ. 23ಕ್ಕೆ ಚಿಕ್ಕಬಳ್ಳಾಪುರದಲ್ಲಿ ನರೇಗಾ ಕೆಲಸವಿದೆ. ಇಕ್ಬಾಲ್ ಹುಸೇನ್ ಗೆ ಬಾಯಿಗೆ ಬೀಗ ಹಾಕಿಕೊಂಡಿದ್ದರೆ ಒಳ್ಳೆಯದು. ಎಲ್ಲಾ ಇಕ್ಬಾಲ್ ಹುಸೇನ್ ಗಳಿಗೂ ಹೇಳ್ತಾ ಇದ್ದೀನಿ. ನನಗೇನಾದ್ರೂ ಒಳ್ಳೆಯದು ಮಾಡಬೇಕು ಅಂದುಕೊಂಡರೆ ಬಾಯಿಯನ್ನ ಹೊಲೆದು ಇಟ್ಟುಕೊಳ್ಳಿ. ಯಾರೆಲ್ಲಾ ನನ್ನ ವಿಚಾರದಲ್ಲಿ ಮಾತಾಡ್ತಾರೆ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದಿದ್ದಾರೆ.
ಬೆಂಗಳೂರಿಗೆ ಬಂದ ಬಳಿಕ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಭೇಟಿ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು, ಅವರ ಕ್ಷೇತ್ರಕ್ಕೇನಾದ್ರೂ ಇರಬೇಕು. ಇಂಡಸ್ಟ್ರಿ ಆರಂಭದ ಬಗ್ಗೆಯೂ ಮಾತಾಡಿರಬಹುದು. ದೆಹಲಿಗೆ ಹೋಗೋದು ಬರೋದು ಇದ್ದೆ ಇರುತ್ತೆ. ಮೀಟಿಂಗ್ ಗಳು ಇದ್ದಾಗ ಹೋಗೋದು ಬರೋದು ಮಾಡಬೇಕು. ನಮ್ಮ ರಾಜ್ಯದ ವಿಚಾರಗಳನ್ನ ಎಲ್ಲೆಂದರಲ್ಲಿ ಮಾತನಾಡುವುದಕ್ಕೆ ಹೋಗುವುದಿಲ್ಲ. ರಾಹುಲ್ ಗಾಂಧಿ ದೇಶದ ಬಗ್ಗೆ ಯೋಚನೆ ಮಾಡ್ತಾರೆ. ಅಭಿವೃದ್ಧಿಗೆ ಏನೆಲ್ಲಾ ಮಾಡಬೇಕು ಎಂಬ ಚರ್ಚೆಗಳಾಗ್ತಾವೆ ಎಂದು ಸ್ಪಷ್ಟನೆ ನೀಡಿದ್ದಾರೆ.




