ಸಿಎಂ ಖುರ್ಚಿಗೆ ಕಾಂಗ್ರೆಸ್ ಟವೆಲ್ ಹಾಕಿ ತಿರುಕನ ಕನಸು ಕಾಣುತ್ತಿದೆ : ಸಿ ಟಿ ರವಿ

suddionenews
1 Min Read

ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಅಂತ ತಿರುಕನ ಕನಸು ಕಾಣುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಈಗ 44 ಸ್ಥಾನಗಳಿಗೆ ಕುಸಿದಿದೆ. ಅದು ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯ ತಪ್ಪು ನಿರ್ಧಾರಗಳಿಂದ. ಮುಂದಿನ ಬಾರಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಅಂತ ಕಾಯ್ತಿದ್ದಾರೆ. ಟವೆಲ್ ಹಾಕಿಕೊಂಡು ತಿರುಕನ ಕನಸು ಕಾಣುತ್ತಿದೆ. ಅವರು ಹಾಕಿರುವ ಟವೆಲ್ ಮುಖ ಒರೆಸಿ ಕೊಳ್ಳಲು ಅಷ್ಟೇ ಬರುತ್ತೆ. ರಾಹುಲ್ ಗಾಂಧಿ ನೇತೃತ್ವದಲ್ಲೇ ಏನಾದ್ರೂ ಚುನಾವಣೆ ಎದುರಿಸಿದ್ರೆ ಸಿಂಗಲ್ ಡಿಜಿಟ್ ಗೆ ಬರ್ತಾರೆ.

ಹಿಂದುತ್ವವಾದಿಗಳನ್ನ ಆತಂಕವಾದಿಗಳು ಅಂತಾರೆ. ಈಗ ಮೇಕೆದಾಟು ಯೋಜನೆಗೆ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಅವ್ರು ಅಧಿಕಾರದಲ್ಲಿದ್ದಾಗ ಯಾಕೆ ಮಾಡಲಿಲ್ಲ. ಹಿಂದೂಗಳು ದೇಶಭಕ್ತರೆ ವಿನಃ ದೇಶ ವಿರೋಧಿಗಳಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *