ರಾಜ್ಯದಲ್ಲಿ ಕಾವೇರಿದ ದಲಿತಾಸ್ತ್ರ : ಯಾಕೆ..? ಏನು ಎಂಬ ಮಾಹಿತಿ ಇಲ್ಲಿದೆ..!

1 Min Read

 

ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ದಲಿತಾಸ್ತ್ರದ್ದೇ ಸದ್ದು ಜೋರಾಗಿದೆ. ಉಪಚುನಾವಣಾ ಪ್ರಚಾರದ ಸಮಯದಲ್ಲಿ ಸಿದ್ದರಾಮಯ್ಯ ಅದ್ಯಾವಾಗ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರಿದ್ದಾರೆ ಅಂತಂದ್ರೋ ಅಂದಿನಿಂದ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಸಿದ್ದರಾಮಯ್ಯ ದಲಿತ ವಿರೋಧಿ ಅಂತ ಕೂಡ ಪ್ರಚಾರ ನಡೆಸಿದ್ದರು. ಇದೀಗ ಬಿಜೆಪಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ರೆಡಿಯಾಗಿದ್ದಾರೆ. ಅದು ದಲಿತ ಮುಖಂಡರಿಂದಲೇ ತಿರುಗೇಟು ನೀಡಲಿದ್ದಾರೆ.

ಮುಳ್ಳನ್ನ ಮುಳ್ಳಿಂದಲೇ ತೆಗೆಯಬೇಕೆಂಬ ಮಾತಿದೆ. ಆ ಮಾತಿನಂತೆ ಸಿದ್ದರಾಮಯ್ಯ ತಿರುಗೇಟು ನೀಡಲು ಸಿದ್ಧವಾಗಿದ್ದಾರೆ. ವಿಜಯಪುರದಲ್ಲಿ ಕಾಂಗ್ರೆಸ್ ಎಡಗೈ ನಾಯಕರಿಂದ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ದಲಿತರಿಂದಲೆ ದಲಿತಾಸ್ತ್ರಕ್ಕೆ ಉತ್ತರ ಕೊಡುವ ಪರಿಯಾಗಿದೆ.

ಇದೇ ಸೋಮವಾರ ಪ್ರತಿಭಟನೆ ನಡೆಯಲಿದೆ. ಮಾಜಿ ಸಚಿವ ಆರ್ ಬಿ ತಿಮ್ಮಾಪುರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಈ ಪ್ರತಿಭಟನೆಯಲ್ಲಿ ಎಚ್ ಆಂಜನೇಯ, ರಾಜ್ಯ ಸಭಾ ಸದಸ್ಯ ಎಲ್ ಹನುಮಂತಯ್ಯ ಕೂಡ ಭಾಗಿಯಾಲಿದ್ದಾರೆ. ಇನ್ನು ಸರಣಿ ಸುದ್ದಿಗೋಷ್ಟಿಗಳನ್ನು ನಡೆಸಿ, ಬಿಜೆಪಿಗರಿಗೆ ತಿರುಗೇಟು ನೀಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *