ನಿರಾಧಾರಾ ಆಪಾದನೆ ಮಾಡುತ್ತಿದ್ದಾರೆ ಕಾಂಗ್ರೆಸ್ ನಾಯಕರು : ಸಚಿವ ಆರಗ ಜ್ಞಾನೇಂದ್ರ

suddionenews
1 Min Read

ಬೆಂಗಳೂರು: ಈ ಕಾಂಗ್ರೆಸ್ ನವರು ಎಮರ್ಜೆನ್ಸಿ ತಂದು ದೇಶವನ್ನೇ ಜೈಲಿನಲ್ಲಿಟ್ಟಿದ್ದರು. ಈಗ ಅವರದ್ದು ಏನು ನಡೆಯಲ್ಲ. ಅದಕ್ಕೆ ಕಂಪ್ಲೈಂಟ್ ಕೊಡುತ್ತಿದ್ದಾರೆ. ಕೊಡಲಿ ಕಾನೂನು ಪ್ರಕಾರವಾಗಿ ಕೊಡಲಿ. ಕಾಂಗ್ರೆಸ್ ನವರು ಏನೇ ಹೇಳಿಕರ ಕೊಟ್ಟರು ಅವರ ಬಳಿ ಮಾಹಿತಿ ಇದ್ದರೆ ಹೊರ ಹಾಕಲಿ. ಬಿಟ್ ಕಾಯಿನ್ ನಲ್ಲಿ ಯಾರೆಲ್ಲಾ ಭಾಗವಹಿಸಿದ್ದರು ಎಂಬುದು ಕಾಂಗ್ರೆಸ್ ನವರಿಗೂ ಗೊತ್ತಿದೆ.

ಕಾಂಗ್ರೆಸ್ ನವರಿಗೆ ಬೇರೆ ವಿಷಯ ಇಲ್ಲ‌. ಜನರ ಮನಸ್ಸನ್ನು ಬೇರೆ ಕಡೆ ಡೈವರ್ಟ್ ಮಾಡುವಂಥ ಒಂದು ಪ್ರಯತ್ನ. ಚುನಾವಣೆ ಹತ್ತಿರ ಬಂದಿದೆ. ನಿರಾಧಾರಾವಾದ ಆಪಾಧನೆ ಮಾಡಯವಂಥದ್ದನ್ನು ಮಾಡುತ್ತಿದ್ದಾರೆ. ಇದು ಸಾರ್ವಜನಿಕರು ಗೊತ್ತಿರುವ ವಿಚಾರ.

ಕೋಲಾರ ಜಿಲ್ಲೆಯ ಶೋಭಾಯಾತ್ರೆಯಲ್ಲಿನ ಕಲ್ಲು ತೂರಾಟದ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಮುಳಬಾಗಿಲಲ್ಲಿ ನಿನ್ನೆ ರಾತ್ರಿ ಶೋಭಯಾತ್ರೆ ನಡೆಯುತ್ತಿರುವಾಗ ಬೇರೆ ಕಡೆಯಿಂದ ಕಲ್ಲು ತೂರಾ ನಡೆದಿದೆ. ಅದರಲ್ಲಿ ಕೆಲವು ಕಾರು, ಮೋಟರ್ ಬೈಕ್ ಜಖಂ ಆಗಿದೆ. ವಿಚಾರಣೆ ನಡೆಯುತ್ತಿದೆ. ಯಾತ್ರೆ ಹೋಗುವಾಗ ಕರೆಂಟ್ ಹೋಗಿತ್ತು, ಕತ್ತಲಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಅದರ ಬಗ್ಗೆ ವಿಚಾರಣೆ ನಡೆಸಲು ಸೂಚಿಸಲಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *