ರಾಮನ ಘೋಷಣೆ ಕೂಗಿದವರು ಋಷಿಗಳಲ್ಲ, ರಾಕ್ಷಸರು : ಕಾಂಗ್ರೆಸ್ ನಾಯಕನ ಮಾತಿಗೆ ಆಕ್ರೋಶ..!

ನವದೆಹಲಿ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಚುನಾವಣಾ ಪ್ತಚಾರದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ರಾಮರಾಜ್ಯ, ರಾಮನ ಘೋಷಣೆ ಬಗ್ಗೆ ಕಾಂಗ್ರೆಸ್ ನಾಯಕ ನಾಲಿಗೆ ಹರಿಬಿಟ್ಟಿದ್ದಾರೆ. ರಾಮ ಘೋಷಣೆ ಕೂಗಿದವರೆಲ್ಲಾ ಋಷಿಗಳಲ್ಲ ರಾಕ್ಷಸರು ಎಂದಿದ್ದಾರೆ. ಕಾಂಗ್ರೆಸ್ ನಾಯಕ ರಶೀದ್ ಅಲ್ವಿಯ ಈ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಈ ದೇಶದಲ್ಲಿ ಜೈಶ್ರೀರಾಮ್ ಎಂಬ ಘೋಷಣೆ ಕೂಗುವ ಮೂಲಕ ಜನರನ್ನ ದಾರಿ ತಪ್ಪಿಸಲಾಗುತ್ತಿದೆ. ಅಂತವರ ಬಗ್ಗೆ ಎಚ್ಚರದಿಂದ ಇರಬೇಕು. ದೇಶ ರಾಮರಾಜ್ಯವಾಗಬೇಕು ಎಂಬುದೇ ನಮ್ಮ ಆಸೆ ಕೂಡ. ಭಾರತದಲ್ಲಿ ರಾಮ ರಾಜ್ಯ ಇದೆ ಅಂತ ಹೇಳ್ತೀವಿ. ರಾಮ ರಾಜ್ಯ ಅಂದ್ರೆ ಹೇಗಿರಬೇಕು. ಜೈಶ್ರೀರಾಮ್ ಅಂತ ಘೋಷಣೆ ಕೂಗುವವರು ರಾಕ್ಷಸರು. ಮೇಕೆಗಳು ಮತ್ತು ಸಿಂಹಗಳು ನೀರು ಕುಡಿಯುವ ರಾಜ್ಯದಲ್ಲಿ ದ್ವೇಷ ಹೇಗೆ ಉಂಟಾಗುತ್ತದೆ..? ಎಂದು ವಿವಾದ ಸೃಷ್ಟಿಸಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಸಲ್ಮಾನ್ ಖುರ್ಷಿದ್ ನಂತರ ಈಗ ರಶೀದ್ ಅಲ್ವಿ, ಜೈಶ್ರೀರಾಮ್ ಅಂತ ಕೂಗುವವರನ್ನ ರಾಕ್ಷಸರು ಅಂತಿದ್ದಾರೆ. ಅಂದ್ರೆ ರಾಮಭಕ್ತರ ಬಗ್ಗೆ ಕಾಂಗ್ರೆಸ್ ನವರಿಗೆ ಅದೆಷ್ಟು ವಿಷವಿರಬೇಡ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *