ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗೆ ಪೈಪೋಟಿ : ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್

1 Min Read

ರಾಮನಗರ: ವಿಧಾನಸಭೆ ಚುನಾವಣೆಗೆ ಒಂಭತ್ತು ತಿಂಗಳು ಬಾಕಿ ಇದೆ. ಹೀಗಿರುವಾಗಲೇ ಎಲ್ಲಾ ಪಕ್ಷಗಳು ಗೆಲ್ಲುವ ಪಣತೊಟ್ಟಿದ್ದಾರೆ. ಅದಕ್ಕಾಗಿಯೇ ಈಗಿನಿಂದಲೇ ತಯಾರಿ ನಡೆಸುತ್ತಿವೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ದೇವೇಗೌಡರು ಮತ್ತು ಕುಮಾರಣ್ಣಂಗೆ ಅವಕಾಶ ಕೊಟ್ಟಿದ್ದೀರಿ, ನನಗೂ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ಗುಂಡ್ಲುಪೇಟೆಯಲ್ಲೂ ಮಾತನಾಡಿದ್ದು, ನನಗೆ ಯಾರೂ ಅಭಿಮಾನಿ ಇಲ್ಲ. ನನಗೆ ಯಾವ ಬಣವೂ ಇಲ್ಲ. ನನ್ನದು ಒಂದೇ ಬಣ. ಅದು ಕಾಂಗ್ರೆಸ್ ಬಣ. ಸಿಎಂ ಆಗಬೇಕು ಎಂಬುದು ನನ್ನ ಆಸೆಯಲ್ಲ, ಕಾರ್ಯಕರ್ತರ ಆಸೆಯಾಗಿದೆ. ಅವರು ಇಷ್ಟಪಟ್ಟ ಕಾರ್ಯಕರ್ತರ ಹೆಸರನ್ನು ಕೂಗುತ್ತಾರೆ. ಅವರನ್ನು ತಡೆಯೋದಕ್ಕೆ ಆಗಲ್ಲ. ನಾನು ಸಾಕಷ್ಟು ಸಲ ಬೈದಿದ್ದೇನೆ ಎಂದಿದ್ದರು.

ಇದೀಗ ರಾಮನಗರದಲ್ಲಿ ಸಿಎಂ ಆಗುವ ಆಸೆಯನ್ನು ಮತ್ತಷ್ಟು ವ್ಯಕ್ತಪಡಿಸಿದ್ದು, ನಮ್ಮ ಪಕ್ಷದ ಅಭ್ಯರ್ಥಿಯನ್ನು ಇಲ್ಲಿಂದ ನಿಲ್ಲಿಸುತ್ತಿದ್ದೇವೆ. ಅವರನ್ನು ಗೆಲ್ಲಿಸಿ. ನನಗೆ ಹಾರ ಹಾಕುವುದು ಬೇಡ, ಅಭ್ಯರ್ಥಿಯನ್ನು ಗೆಲ್ಲಿಸಿ. ಚಾಮುಂಡಿ ನಮ್ಮ ನಾಡಿನ ದೇವತೆ. ನಿನ್ನೆ ಅಲ್ಲಿಯೂ ಬೇಡಿಕೊಂಡು ಬಂದಿದ್ದೇನೆ. ಈಗ ಇಲ್ಲಿಯೂ ಅದನ್ನೇ ಬೇಡಿಕೊಳ್ಳುತ್ತೇನೆ. ರಾಮನಗರದ ಜನತೆ ಎಲ್ಲರಿಗೂ ಅವಕಾಶ ಕೊಟ್ಟಿದ್ದೀರಿ. ನಮಗೂ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *