Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

10 ಸಾವಿರಕ್ಕೂ ದಾಟದೆ ಇದ್ದ ಕೊಬ್ಬರಿ ಈಗ 15 ಸಾವಿರಕ್ಕೆ‌ ಮಾರಾಟ..!

Facebook
Twitter
Telegram
WhatsApp

ಕೊಬ್ಬರಿ ಬೆಳೆಗಾರರಿಗೆ ಸಂತಸವೋ ಸಂತಸ. ಈಗ ಕೊಬ್ಬರಿಗೆ ಒಳ್ಳೆ ಬೆಲೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಈ ಹಿಂದೆಲ್ಲಾ ಕೊಬ್ಬರಿ 10 ಸಾವಿರಕ್ಕೆ ಮಾರಾಟವಾಗಿದ್ದೇ ಹೆಚ್ಚು. ಹತ್ತು ಸಾವಿರದ ಒಳಗೆ ಮಾರಾಟವಾಗುತ್ತಿತ್ತು. ಆದರೆ ಈಗ ಕೊಬ್ಬರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಕೊಬ್ಬರಿ ಧಾರಣೆ ಈಗ 15 ಸಾವಿರ ದಾಟಿದೆ. ಇದು ಕೊಬ್ಬರಿ ಬೆಳೆದ ರೈತರಿಗೆ ಸಂತಸ ತಂದಿದೆ. ತೆಂಗು ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದ್ರೆ ಯಾವುದೇ ಬೆಳೆಯನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಈ ಬಾರಿ ಮಳೆ ಇಲ್ಲದೆ, ರೋಗದ ನಡುವೆಯೂ ತೆಂಗನ್ನು ಉಳಿಸಿಕೊಂಡಿದ್ದಾರೆ.

ತಿಪಟೂರು ಮಾರುಕಟ್ಟೆಯಲ್ಲಿ ಈಚೆಗೆ ಮಾರಾಟವಾದ ಕೊಬ್ಬರಿ ಬೆಲೆ ಎಂದರೆ ಕನಿಷ್ಠ 13,088 ಆದರೆ, ಗರಿಷ್ಠ 15,022 ರೂಒಅಯಿ ಆಗಿದೆ. ಇನ್ನು ಅರಸೀಕೆರೆ ಮಾರುಕಟ್ಟೆಯಲ್ಲು ಕನಿಷ್ಠ 11 ಸಾವಿರಕ್ಕೆ ಮಾರಾಟವಾದರೆ ಗರಿಷ್ಠ 15 ಸಾವಿರ ರೂಪಾಯಿ ಆಗಿತ್ತು. ಕೆ ಆರ್ ಪೇಟೆ ಮಾರುಕಟ್ಟೆಯಲ್ಲಿ ಕನಿಷ್ಠ 9,851 ರೂಪಾಯಿ ಆದರೆ ಗರಿಷ್ಠ ಬೆಲೆಯಲ್ಲಿ 10 ಸಾವಿರಕ್ಮೆ ಮಾರಾಟವಾಗಿದೆ.

ಇನ್ನು ತುರುವೆಕೆರೆಯಲ್ಲಿ 14,500 ಕನಿಷ್ಠ ಬೆಲೆ ಇದ್ದು, ಅದೇ ಬೆಲೆ ಗರಿಷ್ಠ ಬೆಲೆಯಲ್ಲೂ ಮಾರಾಟವಾಗಿದೆ. ಇನ್ನು ಮಧುಗಿರಿ ಮಾರುಕಟ್ಟೆಯಲ್ಲಿ ಕನಿಷ್ಠ 8 ಸಾವಿರಕ್ಕೆ ಮಾರಾಟವಾಗಿದ್ದರೆ, ಗರಿಷ್ಠ 9,900 ಬೆಲೆಗೆ ಮಾರಾಟವಾಗಿದೆ. ಕಳೆದ ಕೆಲವು ವರ್ಷಗಳಿಂದ ಕೊಬ್ಬರಿ ಬೆಲೆಯಲ್ಲು ಇಳಿಕೆಯಾಗಿತ್ತು. ತೆಂಗು ಬೆಳೆಗಾರರು ಇದರಿಂದ ಸಾಕಷ್ಟು ನಷ್ಟ ಅನುಭವಿಸಿದ್ದರು. ಮೊದಲೇ ನುಸಿ ರೋಗ ಸೇರಿದಂತೆ ಹಲವು ರೋಗಗಳು ಬಾಧಿಸುತ್ತಿವೆ. ಇದರ ನಡುವೆಯೂ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಿನ ಕೆಲಸವೇ ಸರಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!