Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಿಲ್ಲಿ ನಟನನ್ನು ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ

---Advertisement---

ಬೆಂಗಳೂರು: ಈ ಬಾರಿಯ ಬಿಗ್ ಬಾಸ್ ಸೀಸನ್ 12 ಶೋಗೆ ತೆರೆ ಬಿದ್ದಿದೆ.‌ ಮಂಡ್ಯದ ಹೈದ ಗಿಲ್ಲಿ ನಟ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಇಡೀ ರಾಜ್ಯವೇ ಕೊಂಡಾಡುವ ಗಿಲ್ಲಿಯನ್ನ ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ಕೊಂಡಾಡಿದ್ದಾರೆ. ತಮ್ಮ ಸಿಎಂ ನಿವಾಸಕ್ಕೆ ಕರೆಸಿಕೊಂಡು ಸನ್ಮಾನ ಮಾಡಿದ್ದಾರೆ. ಗಂಧದ ಹಾರ ಹಾಕಿ ಸನ್ಮಾನಿಸಿದ್ದಲ್ಲದೆ, ಹೆಗಲ ಮೇಲೆ ಕೈ ಹಾಕಿ ಶುಭ ಕೋರಿದ್ದಾರೆ. ಶಬ್ಬಾಶ್ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್, ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್ ಕೂಡ ಉಸ್ಥಿತರಿದ್ದರು. ಗಿಲ್ಲಿಗೆ ಈ ಬಾರಿ ಬಂದಂತ ವೋಟ್ ಗಳು ಕಡಿಮೆ ಏನು ಅಲ್ಲ. ಕೋಟ್ಯಾಂತರ ಜನ ತಮ್ಮ ಸಮಯ ನೀಡಿ ಗೆಲ್ಲಿಸಿದ್ದಾರೆ. ಕಪ್ ಎತ್ತಿಕೊಂಡ ಗಿಲ್ಲಿ ಮೊದಲು ತನ್ನೂರಿಗಡ ಹೋಗಿ, ಎಲ್ಲರನ್ನು ಭೇಟಿ ಮಾಡಿ, ಮೆರವಣಿಗೆ ಬಂದಿದ್ದಾರೆ. ಶಿವಣ್ಣ, ಗಿಲ್ಲಿಗೆ ಗುರುವಿದ್ದಂತೆ. ಹೀಗಾಗಿ ಶಿವಣ್ಣರ ಮನೆಗೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಶಿವಣ್ಣ ಕೂಡ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಕೇಕ್ ಕಟ್ ಮಾಡಿಸಿ, ತಿನ್ನಿಸಿ ಕಳುಹಿಸಿದ್ದಾರೆ.

ಗೆದ್ದ ಖುಷಿಯಲ್ಲಿರುವ ಗಿಲ್ಲಿ ತನ್ನ ಜನತೆಗೆ ಪ್ರಾಮೀಸ್ ಮಾಡಿದ್ದಾರೆ. ನನ್ನನ್ನ ಇಷ್ಟು ದೂರ ಕರೆದುಕೊಂಡು ಬಂದಿದ್ದೀರಾ. ಮನಸ್ಸಿನಲ್ಲಿ ಜಾಗ ಕೊಟ್ಟು, ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೀರಾ. ನಿರಂತರವಾಗಿ ಬೆಂಬಲಿಸಿದ್ದೀರಾ. ಇದುವರೆಗೂ ರನ್ನರ್ ಅಪ್ ಆಗ್ತಿದ್ದ ಗಿಲ್ಲಿಗೆ ಅಭಿಮಾನಿಗಳು ಗೆಲುವಿನ ಕಿರೀಟ ತೊಡಿಸಿ, ಮೆರೆಸಿದ್ದೀರಾ. ಈ ಪ್ರೀತಿಗೆ ಏನೇ ಹೇಳಿದ್ರು, ಎಷ್ಟೇ ಹೇಳಿದ್ರು ಕಡಿಮೇನೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...