ಯಡಿಯೂರಪ್ಪಗೆ ಎಂತ ಕಾಲ ಬಂತು ನೋಡಿ : ವ್ಯಂಗ್ಯವಾಡಿದ ಸಿಎಂ ಇಬ್ರಾಹಿಂ

1 Min Read

 

ಕೊಪ್ಪಳ: ಮಾಜಿ ಸಿಎಂ ಯಡಿಯೂರಪ್ಪ ಕ್ಷೇತ್ರ ಬಿಟ್ಟುಕೊಟ್ಟಿದ್ದು, ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದು, ಅವರು ಬಿಜೆಪಿ ಬಿಟ್ಟಿಲ್ಲ, ಅವರನ್ನ ಬಿಜೆಪಿಯವರೇ ದಬ್ಬಿದ್ದಾರೆ. ಯಡಿಯೂರಪ್ಪ ಅವರಿಗೆ ಎಂಥಾ ಕಾಲ ಬಂತು ನೋಡಿ ಎಂದಿದ್ದಾರೆ.

ಕುಷ್ಟಗಿಯಲ್ಲಿ ಮಾತನಾಡಿರುವ ಇಬ್ರಾಹಿಂ, ಬಿಜೆಪಿ ದಬ್ಬಿರುವುದರಿಂದಲೇ ಯಡಿಯೂರಪ್ಪ ಮಗನಿಗೆ ಟಿಕೆಟ್ ಕೊಡಲಿ ಎಂದು ಅನೌನ್ಸ್ ಮಾಡಿದ್ದಾರೆ. ಅವರೇನು ತ್ಯಾಗ ಮಾಡಿಲ್ಲ ಎಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಮತಗಳು ಕೂಡ ಕಾರಣ. ವೀರಶೈವ ಸಮುದಾಯದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಇದೆ ವೇಳೆ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದು, ಅಂದು ಪಕ್ಷ ಬಿಡುವಾಗಲೂ ಹೇಳಿದ್ದೆ. ತಬ್ಬಲಿ ನೀನಾದೆಯಾ ಮಗನೆ ಎಂದು. ಅಂದು ಸಿದ್ದರಾಮಯ್ಯ ಅವರಿಗೆ ನಿಲ್ಲುವುದಕ್ಕೆ ಜಾಗವೇ ಇರಲಿಲ್ಲ. ನಾನೇ ಚಿಮ್ಮಕಟ್ಟೆ ಬಳಿ ಮಾತಾಡಿಸಿ ಬಾದಾಮಿಗೆ ಕರೆದುಕೊಂಡು ಬಂದೆ. ಸಿದ್ದರಾಮಯ್ಯ ಗೆಲುವಿಗೆ ನಾನೇ ಕಾರಣ. ಆದರೆ ಸಿದ್ದರಾಮಯ್ಯ ನಮಗೆ ಸಾಮಾಜಿಕ ನ್ಯಾಯ ಕೊಡಲಿಲ್ಲ. ಈ ಬಾರಿ ಎಲ್ಲೆ ನಿಂತರು ಗೆಲ್ಲುವುದು ಕಷ್ಟ. ಅಲ್ಪ ಸಂಖ್ಯಾತರು, ದಲಿತರು ಕಾಂಗ್ರೆಸ್ ಬಿಟ್ಟು ಬರುತ್ತಿದ್ದಾರೆ. ಸಿದ್ದರಾಮಯ್ಯ ದಾರಿ ತಪ್ಪಿ ಬಿಟ್ಟಿದ್ದಾರೆ. ಕಾಂಗ್ರೆಸ್, ಬಿಜೆಪಿಯಿಂದ ಜೆಡಿಎಸ್ ಗೆ ಸುಮಾರು 80 ಜನ ಬರುತ್ತಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *