ಮೋದಿ ಪರ ಬ್ಯಾಟ್ ಬೀಸಿದ ಸಿ.ಎಂ.ಇಬ್ರಾಹಿಂ : ಯಾಕೆ ಗೊತ್ತಾ..?

1 Min Read

ಬೆಂಗಳೂರು, ಜೂನ್. 13 :

ಜೆಡಿಎಸ್ ನಿಂದ ಉಚ್ಛಾಟನೆಗೊಂಡ ಮೇಲೆ ಸಿ.ಎಂ.ಇಬ್ರಾಹಿಂ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ ಕೆಲವೊಂದು ವಿಚಾರಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಸುದ್ದಿಯಲ್ಲಿ ಇರ್ತಾರೆ. ಇದೀಗ ಮೋದಿ ಪರ ಬ್ಯಾಟ್ ಬೀಸಿದ್ದು, ಗಮನ ಸೆಳೆದಿದ್ದಾರೆ. ಮೋದಿ ಯಾಕೆ ರಾಜೀನಾಮೆ ಕೊಡ್ಬೇಕು ಅಂತ ಗಟ್ಟಿ ಧ್ವನಿಯಲ್ಲಿ ಕೇಳಿದ್ದಾರೆ.

ಅಹ್ಮದಾಬಾದ್ ನಲ್ಲಿ ನಡೆದ ವಿಮಾನ ದುರಂತ ಎಲ್ಲರಿಗೂ ಬೇಸರ ತರಿಸಿದೆ. ವಿಮಾನ ದುರಂತದಲ್ಲಿ ಸತ್ತವರ ಒಂದೊಂದು ಕಥೆಗಳನ್ನು ಕೇಳ್ತಾ ಇದ್ರೆ ಮನಸ್ಸಿಗೆ ನೋವುಂಟಾಗದೆ ಇರಲಾರದು. ತಂಗಿಗೆ ಲಂಡನ್ ತೋರಿಸಲು ಕರೆದುಕೊಂಡು ಹೋಗ್ತಿದ್ದ ಅಣ್ಣ, ಹೆಂಡತಿ ಚಿತಾ ಭಸ್ಮ ಬಿಟ್ಟು ಬರ್ತಿದ್ದ ಗಂಡ, ಹೆಂಡತಿಯನ್ನ ಕರೆದುಕೊಂಡು ಬರಲು ಹೊರಟಿದ್ದ ಮಾಜಿ ಸಿಎಂ ಹೀಗೆ ಹಲವು ವಿಚಾರಗಳನ್ನು ಕೇಳಿದರೆ ದುಃಖವಾಗದೆ ಇರುತ್ತದೆಯೇ. ಆ ಸಾವುಗಳಿಗೆ ಇಡೀ ದೇಶ ಕಂಬನಿ ಮಿಡಿದಿದೆ‌. ಈ ಘಟನೆಯ ಬಳಿಕ ಹಲವರು ಪಿಎಂ ಮೋದಿ ಮೇಲೆ ಗದಾಪ್ರಹಾರ ಮಾಡ್ತಾ ಇದ್ದಾರೆ‌. ನೈತಿಕ ಹೊಣೆಹೊತ್ತು ರಾಜೀನಾಮೆಯನ್ನ ಕೊಡಲೇಬೇಕು ಅಂತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿ.ಎಂ.ಇಬ್ರಾಹಿಂ ಮಾತನಾಡಿದ್ದಾರೆ.

ಈ ಪ್ರಕರಣಕ್ಕೂ ಮೋದಿಗೂ ಏನ್ರಿ ಸಂಬಂಧ..? ಮೋದಿ ಯಾಕೆ ರಾಜೀನಾಮೆ ಕೊಡಬೇಕು..? ಮೋದಿ ಅವರೇನು ಪೈಲಟ್ ಹ..? ನಾಗರಿಕ ವಿಮಾನಯಾನ ಸಚಿವರು ರಾಜೀನಾಮೆ ಕೊಡಬೇಕು‌. ವಿಮಾನದ ಇಂಜಿನ್ ಫೇಲ್ಯೂರ್ ಅಂದ್ರೆ ಹೇಗೆ..? ಟೇಕಾಫ್ ಆಗೋದಕ್ಕೂ ಮುನ್ನ ಎಲ್ಲಾ ಕ್ಲಿಯರೆನ್ಸ್ ಆಗಿದೆ ಅಂತ ಅಲ್ವಾ..? ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ. ಆದರೂ ಲಂಡನ್ ಗೆ ತೆರಳುತ್ತಿದ್ದ ವಿಮಾನ ಕೇವಲ ಐದೇ ನಿಮಿಷಕ್ಕೆ ಪತನಗೊಂಡಿದೆ. ಇದು ಎಲ್ಲರಿಗೂ ಶಾಕಿಂಗ್ ಕೂಡ.

Share This Article
Leave a Comment

Leave a Reply

Your email address will not be published. Required fields are marked *