ಕುಮಾರಣ್ಣಂಗೆ ನಾಡಿನ‌ ಚಿಂತೆ.. ಸಿದ್ದರಾಮಯ್ಯಗೆ ರಾಹುಲ್ ಚಿಂತೆ.. ಬೊಮ್ಮಾಯಿಗೆ ಮೋದಿ ಚಿಂತೆ : ಸಿ ಎಂ ಇಬ್ರಾಹಿಂ

1 Min Read

 

ಬೆಂಗಳೂರು: ಶುಭ ಮುಹೂರ್ತದಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ. 16 ರವರೆಗೆ ದಿನಕ್ಕೆ ಮೂರು ಕಡೆ ಕುಮಾರಸ್ವಾಮಿ ಮತ್ತೆ ಮೂರು ಕಡೆ ನಾನು ಮಾಡ್ತೀನಿ. ನಾವು ಜನರನ್ನು ಕರೆದುಕೊಂಡು ಬರೋದಿಲ್ಲ. ಜನರೇ ಬರ್ತಾರೆ ನಮ್ಮ ಕಾರ್ಯಕ್ರಮಕ್ಕೆ. ಡಿಸೆಂಬರ್ ಅಷ್ಟೊತ್ತಿಗೆ ವಿಧಾನಸಭಾ ಚುನಾವಣೆ ಆಗಲಿದೆ ಅಂತಿದ್ದಾರೆ ಎಂದು ಸಿ ಎಂ ಇಬ್ರಾಹಿಂ ಹೇಳಿದ್ದಾರೆ.

ಬೊಮ್ಮಾಯಿಗೆ ಅದಕ್ಕಾಗಿಯೇ ಸಚಿವ ಸಂಪುಟ ವಿಸ್ತರಣೆ ಆಗಲಿಲ್ಲ. ಕುಮಾರಣ್ಣಂಗೆ ನಾಡಿನ‌ ಚಿಂತೆ ಇದೆ. ಸಿದ್ದರಾಮಯ್ಯಗೆ ರಾಹುಲ್ ಚಿಂತೆ, ಬೊಮ್ಮಾಯಿಗೆ ಮೋದಿ ಚಿಂತೆ ಇದೆ ಎಂದಿದ್ದಾರೆ.

ದೇವೇಗೌಡರು ಬೆಂಗಳೂರಿಗೆ ಏನು ಮಾಡಿದ್ದಾರೆ ಅಂತ ಗೊತ್ತಾಗಿದೆ. ಬಿಜೆಪಿಯವರು ಡೂಪ್ಲಿಕೇಟ್ ಗಂಗೆ ತರ್ತಾರೆ. ನಾವು ನಿಜ‌ ಗಂಗೆ ತಂದಿದ್ದೀವಿ ಎಂದಿದ್ದಾರೆ.

ರಾಜಣ್ಣ ಹೇಳಿಕೆಗೆ ಇಬ್ರಾಹಿಂ ಕೆಂಡಕಾರಿದ್ದು, ದೇವೇಗೌಡರು ಕೇವಲ ಕುಮಾರಸ್ವಾಮಿ, ಇಬ್ರಾಹಿಂಗೆ ತಂದೆ ಅಲ್ಲ. ಆರುವರೆ ಕೋಟಿ ಜನರಿಗೆ ಅವರು ತಂದೆ. ನಿಮ್ಮನ್ನು ಮಂತ್ರಿ ಮಾಡಿದ್ದು ದೇವೇಗೌಡರು. ತಿಂದ ಮನೆಗೆ ಈ ರೀತಿ ದ್ರೋಹ ಮಾಡ್ತಾ ಇದ್ದಿರಲಾ, ನಿಮಗೆ ತಂದೆ ಇಲ್ವೇನ್ರಿ..?. ಮುಂದೆ ತುಮಕೂರು ಜನ ನಿಮಗೆ ಉತ್ತರ ಕೊಡ್ತಾರೆ.

ದೇವೇಗೌಡರ ಒಂದೊಂದು ದಿನವೂ ನಮಗೆ ಸ್ಪೂರ್ತಿ. ಸೂರ್ಯ ಚಂದ್ರಾದಿ ಇರೋವರೆಗೂ ದೇವೇಗೌಡರ ಹೆಸರು ಇರುತ್ತೆ. ಇತಿಹಾಸ ಇರೋವರೆಗೂ ಅವರ ಹೆಸರು ಇರುತ್ತೆ. ಕನ್ನಡಿಗ ಕೆಂಪು ಕೋಟೆ ಮೇಲೆ ಭಾವುಟ ಆರಿಸಿದ್ದು. ಕೂಡಲೇ ಅವರ ಕ್ಷಮೆಯಾಚಿಸಬೇಕು. ಮನೆಗೆ ಬಂದು ಕೂಡಲೇ ಕ್ಷಮೆ ಯಾಚಿಸುವಂತೆ ಸದ್ಬುದ್ದಿ ಕೊಡಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *