ಸರ್ಕಾರದ ನಿಯಂತ್ರಣದಲ್ಲಿರುವ ದೇವಾಲಯಗಳಿಗೆ ಶೀಘ್ರವೇ ಮುಕ್ತಿ : ಸಿಎಂ ಬೊಮ್ಮಾಯಿ

suddionenews
0 Min Read

ಹುಬ್ಬಳ್ಳಿ: ಇವತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರಿ ದೇವಸ್ಥಾನಗಳಿಗೆ ಶೀಘ್ರವೇ ಮುಕ್ತಿ ಸಿಗಲಿದೆ ಎಂದಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲಿರುವ ದೇವಸ್ಥಾನಗಳಿಗೆ ಮುಕ್ತಿ ನೀಡುವುದಾಗಿ ತಿಳಿಸಿದ್ದಾರೆ.

ನಮ್ಮ ಹಿಂದೂ ದೇವಾಲಯಗಳು ಹಲವು ಕಟ್ಟುಪಾಡುಗಳಿಂದ ಕೂಡಿದೆ. ದೇವಸ್ಥಾನದ ಆದಾಯ ಬೇರೆ ಕಡೆ ಹರಿದು ಹೋಗದಂತೆ ಎಚ್ಚರ ವಹಿಸಲು, ಆ ಆದಾಯ ದೇವಸ್ಥಾನಗಳಿಗೆ ಬಳಸುವಂತ ಯೋಜನೆಯನ್ನು ನಮ್ಮ ಸರ್ಕಾರ ಜಾರಿ ತರಲಿದೆ ಎಂದಿದ್ದಾರೆ.

ಬಜೆಟ್ ಅಧಿವೇಶನಕ್ಕೆ ಮುನ್ನವೇ ಈ ಯೋಜನೆ ಜಾರಿಗೆ ತರುವ ಫ್ಲ್ಯಾನ್ ನಲ್ಲಿದೆ ಸರ್ಕಾರ. ಹಿಂದೂ ದೇವಾಲಯಗಳನ್ನ ಹೊರತುಪಡಿಸಿ, ಇತರೆ ಪ್ರಾರ್ಥನ ಮಂದಿರಗಳು ಸ್ವಾತಂತ್ರ್ಯವಾಗಿವೆ. ಹೀಗಾಗಿ ಹಿಂದೂ ದೇವಾಲಯಗಳನ್ನು ಸ್ವಾತಂತ್ರ್ಯ ತರುವ ಪ್ರಯತ್ನ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *