ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 24 : ತಾಲ್ಲೂಕಿನ ಭೀಮಸಮುದ್ರ ಗ್ರಾಮದ ವಾಸಿ ಹಾಗೂ ಚಿತ್ರದುರ್ಗ ಜಿಲ್ಲಾ ನಮ್ಮ ಆದ್ವಿ ಪಕ್ಷದ ಜಿಲ್ಲಾಧ್ಯಕ್ಷರಾದ ಬಿ.ಇ. ಜಗದೀಶ್ ರವರ ಸಹೋದರಿ ವಂದನ ಎಸ್ ಮೂರ್ತಿ (62 ವರ್ಷ) ಇಂದು ಸಂಜೆ 4:00 ಗಂಟೆಗೆ ನಿಧನರಾದರು.
ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರವನ್ನು ನಾಳೆ (ಸೋಮವಾರ ಬೆಳಿಗ್ಗೆ 11.30 ಗಂಟೆಗೆ) ಭೀಮಸಮುದ್ರ ಗ್ರಾಮದ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ : ಮಾಜಿ ಕೇಂದ್ರ ಸಚಿವರಾದ ಜಿಎಂ ಸಿದ್ದೇಶ್ವರ್,
ಚಿತ್ರದುರ್ಗ ಜಿಲ್ಲಾ ನಮ್ಮ ಆದ್ವಿ ಪಕ್ಷದ ಜಿಲ್ಲಾಧ್ಯಕ್ಷರಾದ BE ಜಗದೀಶ್, ಬಿಸಿ ಸರಸ್ವತಿ ಚನ್ನಬಸಪ್ಪ, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ ಎಸ್ ಮಂಜುನಾಥ್, ಬಿಟಿ ಪುಟ್ಟಪ್ಪ, ಬಿಟಿ ಸಿದ್ದೇಶ್ ಸೇರಿದಂತೆ ಇತರೆ ಗಣ್ಯರು ಸಂತಾಪ ಸೂಚಿಸಿದ್ದಾರೆ.




