ಚಿತ್ರದುರ್ಗ | ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ

1 Min Read

 

ಚಿತ್ರದುರ್ಗ, (ಜುಲೈ 04) : ತಾಲ್ಲೂಕಿನ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಚುನಾವಣೆ ಪ್ರಕ್ರಿಯೆಯು ಜೂನ್ 27 ರಂದು ಪ್ರಾರಂಭವಾಗಿದ್ದು, ಬೈಲಾ ನಿಯಮದಂತೆ ನಿಗಧಿಯಾಗಿದ್ದ 13 ನಿರ್ದೇಶಕರ ಹುದ್ದೆಗಳಿಗೆ 13 ನಾಮ ಪತ್ರಗಳು ಸಲ್ಲಿಕೆಯಾಗಿದ್ದು, ಪರಿಶೀಲನೆಯ ನಂತರ ಎಲ್ಲಾ ನಾಮಪತ್ರಗಳು ಅಂಗೀಕೃತವಾಗಿವೆ.

ನಿಗಧಿಪಡಿಸಿದ ಹುದ್ದೆಗಳ ಸಂಖ್ಯೆಗೆ ಸಮಾನವಾಗಿ ನಾಮಪತ್ರಗಳು ಸಲ್ಲಿಕೆಯಾಗಿರುವ ಪ್ರಯುಕ್ತ ಮತದಾನ ಪ್ರಕ್ರಿಯೆ ನಡೆದಿರುವುದಿಲ್ಲ. ನಾಮಪತ್ರ ಸಲ್ಲಿಸಿದ್ದ ಎಲ್ಲ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರ ವಿವರ ಇಂತಿದೆ.
ಟಿ.ವೆಂಕಟಶಿವರೆಡ್ಡಿ, ಹೆಚ್.ಆರ್.ನಾಭೂಷಣ್,
ಬಿ.ಗಾಯತ್ರಿ,
ಪಿ.ಸದಾನಂದ,
ಭೀಮಪ್ಪ ಮಾದರ,
ಎಸ್.ರಾಜಪ್ಪ,
ಜಿ.ಎಸ್.ಶಿವಣ್ಣ,
ಎಂ.ನಿಜಲಿಂಗಪ್ಪ,
ಎಂ.ವಿ.ಚೆನ್ನಯ್ಯ,
ಟಿ.ಎಂ.ಸುಜಾತ,
ಟಿ.ಬಸವರಾಜಪ್ಪ,
ಡಿ.ಮಂಜುನಾಥ್,
ಟಿ.ಶ್ರೀನಿವಾಸ ಅವರು ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು  ಚಿತ್ರದುರ್ಗ ತಾಲ್ಲೂಕು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಚುನಾವಣಾಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *