Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅನೈತಿಕ ಸಂಬಂಧದ ಅಪಪ್ರಚಾರದಿಂದ ಚಿತ್ರದುರ್ಗದ ವಿದ್ಯಾರ್ಥಿನಿ ಸೂಸೈಡ್..!

---Advertisement---

ಚಿತ್ರದುರ್ಗ : ನೋಡೋಕೆ ಸುಂದರವಾಗಿದ್ದ ಹುಡುಗಿ. ಈ ವರ್ಷ ಮುಗಿದಿದ್ದರೆ ಡಿಗ್ರಿ ಮುಗೀತಾ ಇತ್ತು. ಆಡೋರ ಮಾತಿಗೆಲ್ಲಾ ಕಿವಿಕೊಡದೆ ಹೋಗಿದ್ದರೆ ಪದವೀಧರೆಯಾಗಿ, ಅಪ್ಪ ಅಮ್ಮನ ಕನಸಿಗೆ ರೆಕ್ಕೆ ಕಟ್ಟಿ, ಅವಳು ಹಾರುತ್ತಿದ್ದಳು. ಆದರೆ ಬೇಡದ ಮಾತುಗಳಿಗೆ ಕಿವಿಕೊಟ್ಟು ಇಂದು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಇದಕ್ಕೆ ಹೊಣೆ ಯಾರೂ ಹೇಳಿ. ಈ ವಿದ್ಯಾರ್ಥಿನಿ ಪ್ರಾಣ ಬಿಡೋಕೆ ಕಾರಣ ಕಾಲೇಜಿನಲ್ಲಿ ಹಬ್ಬಿಸಿದ್ದ ಗಾಸಿಪ್. ಲೆಕ್ಚರರ್ ಜೊತೆಗೆ ಅನೈತಿಕ ಸಂಬಂಧವಿದೆ ಎಂಬ ಮಾತು.

ಹೌದು, ಲಿಖಿತಾಗೆ ಈಗಿನ್ನು 22 ವರ್ಷ. ಮಲ್ಲಾಡಿಹಳ್ಳಿಯಲ್ಲಿರುವ ಆಯುರ್ವೇದ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡ್ತಾ ಇದ್ದರು. ಬಿಎಂಎಸ್ ವ್ಯಾಸಂಗ ಮಾಡ್ತಾ ಇದ್ದರು. ಅದೇ ಕಾಲೇಜಿನ ಉಪನ್ಯಾಸಕರಾಗಿದ್ದ ಡಾ.ರಾಜು ಅವರೊಂದಿಗೆ ಲಿಖಿತಾ ಸಂಬಂಧ ಹೊಂದಿದ್ದಾಳೆ ಎಂಬ ಅಪಪ್ರಚಾರ ಕಾಲೇಜಿನಲ್ಲಿ ಜೋರಾಗಿಯೇ ಹಬ್ಬಿತ್ತು. ಆಕೆಯ ಸಹಪಾಠಿಗಳೇ ಅದನ್ನ ಹಬ್ಬಿಸಿದ್ದರು. ಈ ಸುದ್ದಿ ಡಾ.ರಾಜು ಅವರ ಪತ್ನಿಯ ತನಕವೂ ಹೋಗಿತ್ತು. ಇದನ್ನೇ ನಂಬಿದ್ದ ನಿಶಾ, ಕಾಲೇಜಿಗೂ ಬಂದು ಗಲಾಟೆ ಮಾಡಿದ್ದರು.

ಕಾಲೇಜಿಗೆ ಬಂದಿದ್ದ ನಿಶಾ, ಇಡೀ ಕಾಲೇಜು ನೋಡುವಂತೆ ಲಿಖಿತಾ ವಿರುದ್ಧ ಕೂಗಾಡಿದ್ದರು, ರಂಪಾಟ ಮಾಡಿದ್ದರು. ಇದರಿಂದ ನೊಂದ ಲಿಖಿತಾ ಪ್ರಾಣ ಕಳೆದುಕೊಂಡಿದ್ದಾಳೆ. ತನ್ನ ಮನೆಯಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾಳೆ. ಅದಕ್ಕೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾಳೆ. ವಿಷಯ ತಿಳಿದು ಚಿತ್ರದುರ್ಗದ ಎಸ್ಪಿ ರಂಜಿತ್ ಕುಮಾರ್ ಬಂಡಾರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಾಗಿದೆ. ಡೆತ್ ನೋಟ್ ಬರೆದಿರುವ ಕಾರಣ, ಪೊಲೀಸರು ಅವರನ್ನ ತನಿಖೆಯನ್ನು ನಡೆಸಲಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now