ಚಿತ್ರದುರ್ಗ | ಸಿರಿಗೆರೆ ನಾಗರಾಜ್ ನಿಧನ

0 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 16 : ತಾಲ್ಲೂಕಿನ ಸಿರಿಗೆರೆಯ ಸಿರಿಗೆರೆ ತರಳಬಾಳು ಕ್ಲಾತ್‌ ಸ್ಟೋರ್ಸ್ ಮಾಲೀಕರಾದ ಜಿ. ನಾಗರಾಜ್‌ (48) ಇಂದು ಮಧ್ಯಾಹ್ನ ಕಡಿಮೆ ರಕ್ತದ ಒತ್ತಡದಿಂದ ಚಿತ್ರದುರ್ಗದಲ್ಲಿ ನಿಧನರಾಗಿದ್ದಾರೆ.

ಮಧ್ಯಾಹ್ನ ಊಟ ಮಾಡುವ ವೇಳೆ ನೋಡು ನೋಡುತ್ತಿದ್ದಂತೆಯೇ ಕುಳಿತಲ್ಲಿಯೇ ಕುಸಿದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ತಪಾಸಣೆ ಬಳಿಕ ಸಾವನ್ನಪ್ಪಿರುವುದು ದೃಢಪಟ್ಟಿದೆ. ಮೃತರು ಪತ್ನಿ, ತಂದೆ, ತಾಯಿ, ಈರ್ವರು ಸಹೋದರರು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.
ಅವರ ಅಂತ್ಯ ಸಂಸ್ಕಾರವು ಸಿರಿಗೆರೆಯ ಅವರ ಜಮೀನಿನಲ್ಲಿ ಭಾನುವಾರ 12 ಗಂಟೆಗೆ ನಡೆಯುವುದೆಂದು ಕುಟುಂಬ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *