ಚಿತ್ರದುರ್ಗ | ಪ್ರತ್ಯೇಕ ಅಪಘಾತ : ಇಬ್ಬರು ಸಾವು

suddionenews
1 Min Read

ಚಿತ್ರದುರ್ಗ, (ಡಿಸೆಂಬರ್ .24) :ತಾಲ್ಲೂಕಿನ ಭರಮಸಾಗರ  ದೊಡ್ಡಕೆರೆಗೆ ಕಾರು ಉರುಳಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಬಿದರಕೆರೆ ಕಡೆಯಿಂದ ಭರಮಸಾಗರ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಕಾರು ನಿಯಂತ್ರಣ ತಪ್ಪಿ ಭರಮಸಾಗರದ
ಕೆರೆಯೊಳಗೆ ಬಿದ್ದು ತುಮಕೂರು ಮೂಲದ ರಮೇಶ್.ಜಿ(43) ಎಂಬ ವ್ಯಕ್ತಿ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ಲಾರಿ ಪಲ್ಟಿ, ಚಾಲಕನ ಸಾವು, ಇಬ್ಬರಿಗೆ ಗಾಯ

ಚಿತ್ರದುರ್ಗ,(ಡಿಸೆಂಬರ್.24)  : ತಾಲ್ಲೂಕಿನ ಕ್ಯಾದಿಗೆರೆ ಸಮೀಪದ ಎನ್.ಹೆಚ್.48 ರಸ್ತೆಯ ಅಂಡರ್ ಪಾಸ್ ಬಳಿ ಲಾರಿ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ
ಗುರುವಾರ ರಾತ್ರಿ ನಡೆದಿದೆ.

ಚಿತ್ರದುರ್ಗದ ಕಡೆಯಿಂದ ಹಿರಿಯೂರು ಕಡೆಗೆ ಹೋಗುತ್ತಿದ್ದ  ಲಾರಿ ರಸ್ತೆಯಲ್ಲಿನ ತಿರುವನ್ನು ಗಮನಿಸದೇ ಎಡಕ್ಕೆ ತಿರುಗಿಸಲು ಹೋಗಿ ಡಿವೈಡರ್ ಹತ್ತಿಸಿ ಹಾಗೇ ಮುಂದೆ ಹೋಗಿ ಲಾರಿಯನ್ನು ಬಲಕ್ಕೆ ಬೀಳಿಸಿದ್ದರಿಂದ ಲಾರಿಯ ಚಾಲಕ ಮಹಾರಾಷ್ಟ್ರದ ಪಂಡರಪುರ ತಾಲ್ಲೂಕಿನ ಅನಿಲ್ ಸುಭಾಷ್ ಸಾತೆ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಲಾರಿಯಲ್ಲಿದ್ದ ಸೂರಜ್ ಕುಮಾರ್ ಮತ್ತು ಕಿರಣ್ ಬಾಗಲ್ ರವರಿಗೆ  ಗಾಯಗಳಾಗಿವೆ.

ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *