ಸುದ್ದಿಒನ್, ಚಿತ್ರದುರ್ಗ, ಮೇ. 25 : ನಗರದ ಧವಳಗಿರಿ ಬಡಾವಣೆ ನಿವಾಸಿ ಲಲಿತಮ್ಮ (70 ವರ್ಷ) ಅವರು ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಓರ್ವ ಪುತ್ರಿ, ಅಳಿಯ ಪಿ. ನಾಗರಾಜ ಶೆಟ್ಟಿ (ದಿನಪತ್ರಿಕೆ ವಿತರಕರು) ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಆರ್ಯ ವೈಶ್ಯ ಸಂಪ್ರದಾಯದಂತೆ 12 : 30 ಕ್ಕೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ಮೊ. 9964666125 ಸಂಪರ್ಕಿಸಲು ಕೋರಿದೆ.




