ಸುದ್ದಿಒನ್, ಚಿತ್ರದುರ್ಗ, ಮೇ. 28 : ನೆಹರೂ ನಗರದ ನಿವಾಸಿ ಪತ್ರಕರ್ತ ಹಾಗೂ ವಕೀಲ ಚನ್ನಬಸವಯ್ಯ (45 ವರ್ಷ) ಇಂದು (ಗುರುವಾರ) ಬೆಳಗ್ಗೆ ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದರು.
ಮೃತರು ತಾಯಿ, ಪತ್ನಿ, ಕಿರಿಯ ಸಹೋ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಸವೇಶ್ವರ ಮೆಡಿಕಲ್ ಕಾಲೇಜಿಗೆ (ಜೆ.ಎಂ.ಐ.ಟಿ. ಕಾಲೇಜ್ ಆವರಣ) ದೇಹದಾನ ಮಾಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




