ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 06: ಅಮೃತ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಇನ್ನರ್ ವೀಲ್ ಕ್ಲಬ್, ದೇವಾಲಯ ಸಂವರ್ಧನಾ ಸಮಿತಿ, ಪತಂಜಲಿ ಯೋಗ ಸಮಿತಿ ಹಾಗೂ ಧವಳಗಿರಿ ಬಡಾವಣೆ ನಿವಾಸಿಗಳ ಸಂಯುಕ್ತಾಶ್ರಯದಲ್ಲಿ ಇದೇ ಆಗಸ್ಟ್ 08ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಗರದ ಧವಳಗಿರಿ ಬಡಾವಣೆಯಲ್ಲಿರುವ ಗಾಯತ್ರಿ ಶಿವರಾಮ್ ಇನ್ನರ್ ವ್ಹೀಲ್ ಭವನದಲ್ಲಿ “ಉಚಿತ ಆರೋಗ್ಯ ತಪಾಸಣಾ ಶಿಬಿರ” ಆಯೋಜಿಸಲಾಗಿದೆ.
ಶಿಬಿರದಲ್ಲಿ ಪಂಚಕರ್ಮ ಚಿಕಿತ್ಸೆಯ ಮೇಲೆ ಶೇ. 20 ರಷ್ಟು ರಿಯಾಯಿತಿ ದೊರೆಯಲಿದ್ದು, ಯೋಗ ಮತ್ತು ಫಿಸಿಯೋಥೆರಪಿ ಚಿಕಿತ್ಸಾ ಸೌಲಭ್ಯವೂ ಲಭ್ಯವಿರಲಿದೆ.
ಸ್ತ್ರೀ ರೋಗ, ಮುಟ್ಟಿನ ಸಮಸ್ಯೆ, ಗರ್ಭಿಣಿ ತಪಾಸಣೆ, ಅಜೀರ್ಣ, ಗ್ಯಾಸ್ಟ್ರಿಕ್, ಸ್ಥೂಲಕಾಯ, ಚರ್ಮರೋಗ, ಕೂದಲು ಉದುರುವಿಕೆ, ಮಂಡಿನೋವು, ಸೊಂಟನೋವು, ಸಂಧಿವಾತ, ಬಿ.ಪಿ, ಮಧುಮೇಹ, ಉಸಿರಾಟದ ತೊಂದರೆ, ಪಾಶ್ರ್ವವಾಯು, ಬಾಲರೋಗ, ಇ.ಎನ್.ಟಿ (ಕಿವಿ, ಮೂಗು, ಕಣ್ಣು, ಗಂಟಲು) ಹಾಗೂ ಮೂಲವ್ಯಾಧಿ, ಕಿಡ್ನಿ ಕಲ್ಲು ಸೇರಿದಂತೆ ವಿವಿಧ ಶಸ್ತ್ರ ಚಿಕಿತ್ಸೆ ಸಂಬಂಧಿತ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಸಲಹೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿ.ಎಸ್. ಗುರುಮೂರ್ತಿ ಅವರ ಮೊಬೈಲ್ ಸಂಖ್ಯೆ 9449145416 ಅಥವಾ ಅಮೃತ ಆಯುರ್ವೇದ ಕಾಲೇಜು ದೂರವಾಣಿ: 08194-234844 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.











