ಚಿತ್ರದುರ್ಗ | ಮರ್ಚೆಂಟ್ಸ್ ಬ್ಯಾಂಕಿನಲ್ಲಿ ಸಹಕಾರ ಸಪ್ತಾಹ ಧ್ವಜಾರೋಹಣ

1 Min Read

ಸುದ್ದಿಒನ್, ಚಿತ್ರದುರ್ಗ, (ನ. 15) : ಜಿಲ್ಲೆಯ ಪ್ರತಿಷ್ಠಿತ ಸೌಹಾರ್ದ ಸಹಕಾರ ಬ್ಯಾಂಕುಗಳಲ್ಲೊಂದಾದ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕಿನ ಜಯಚಾಮರಾಜೇಂದ್ರ ಬಡಾವಣೆ (ಜೆ.ಸಿ.ಆರ್) ಶಾಖೆಯಲ್ಲಿ ನವೆಂಬರ್ 14 ರಂದು 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ ಸಹಕಾರ ಧ್ವಜಾರೋಹಣ ನೆರವೇರಿಸಿ, ಹಾಜರಿದ್ದ ಆಡಳಿತ ಮಂಡಳಿ ಸದಸ್ಯರು ಹಾಗೂ ವಿವಿಧ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ ವರ್ಗಕ್ಕೆ ಸಹಕಾರ ಸಪ್ತಾಹ, ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಇದೇ ಸಂದರ್ಭದಲ್ಲಿ ಮಹಾತ್ಮಾಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು..
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಎಲ್.ಈ. ಶ್ರೀನಿವಾಸ ಬಾಬು, ನಿರ್ದೇಶಕರುಗಳಾದ ರಘುರಾಮ ರೆಡ್ಡಿ, ಜೆ. ಸುರೇಶ್, ಶ್ರೀಮತಿ ಎಸ್. ಇಂದ್ರಮ್ಮ, ಶ. ಮಂಜುನಾಥ, ಟಿ.ಎಚ್. ರಾಜಪ್ಪ, ವೃತ್ತಿ ಪರ ನಿರ್ದೇಶಕ ಎಂ.ವಿ. ರಾಜೀವ್, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಆರ್. ಮಲ್ಲಿಕಾರ್ಜುನ, ವಿವಿಧ ಶಾಖೆಗಳ ವ್ಯವಸ್ಥಾಪಕರುಗಳು, ಬ್ಯಾಂಕಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks