ಚಿತ್ರದುರ್ಗ | ಬಾಂಡ್ ತಿಪ್ಪೇಸ್ವಾಮಿ ನಿಧನ

1 Min Read

ಸುದ್ದಿಒನ್, ಚಿತ್ರದುರ್ಗ ಫೆ. 27 : ನಗರಸಭಾ ಮಾಜಿ ಸದಸ್ಯರು ಹಾಗೂ ಜನತಾದಳದ ಹಿರಿಯ ಮುಖಂಡರಾದ ಬಾಂಡ್ ತಿಪ್ಪೇಸ್ವಾಮಿ [86 ವರ್ಷ] ಅನಾರೋಗ್ಯದ ಕಾರಣದಿಂದ ನಿನ್ನೆ (ಫೆ. 26)ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು.

ಮೃತರಿಗೆ ಇಬ್ಬರು ಪುತ್ರರಿದ್ದಾರೆ. ಇವರು ಬಿಜೆಪಿ ಕಾರ್ಯಕರ್ತ ಯಶ್ವಂತ್ ಕುಮಾರ್ ಅವರ ತಂದೆಯವರಾಗಿದ್ದಾರೆ.

ನಗರದ ಕರುವಿನಕಟ್ಟೆ ಬಳಿಯಲ್ಲಿನ ಕಬೀರಾನಂದ ಶಾಲೆ ಹತ್ತಿರ ಇರುವ ಅವರ ನಿವಾಸಕ್ಕೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ತದ ನಂತರ 5 ಗಂಟೆಯಿಂದ ಜೋಗಿಮಟ್ಟಿ ರಸ್ತೆಯಲ್ಲಿನ ಕೆಂಚಮ್ಮನ ಕಟ್ಟೆ ಬಳಿಯಲ್ಲಿನ ಈಶ್ವರ ದೇವಸ್ಥಾನದ ಬಳಿಯಲ್ಲಿ ಮೃತರ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

ಸಂತಾಪ : ನಗರಸಭಾ ಮಾಜಿ ಸದಸ್ಯರು ಹಾಗೂ ಜನತಾದಳದ ಹಿರಿಯ ಮುಖಂಡರಾದ ಬಾಂಡ್ ತಿಪ್ಪೇಸ್ವಾಮಿರವರ ನಿಧನಕ್ಕೆ ಸಂಸದ ಗೋವಿಂದ ಕಾರಜೋಳ ಸೇರಿದಂತೆ ಪಕ್ಷ ಬೇಧ ಮರೆತು ಹಲವು ಪಕ್ಷಗಳ ಮುಖಂಡರು ಸಂತಾಪವನ್ನು ಸೂಚಿಸಿದ್ದಾರೆ.

Share This Article
Enable Notifications OK No thanks