ಚಿತ್ರದುರ್ಗ | ರಸ್ತೆ ಗುಂಡಿ ಮುಚ್ಚಿದ ಆರ್ಯ ವೈಶ್ಯ ಸಂಘ : ಜನರ ಮೆಚ್ಚುಗೆ

1 Min Read

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ನಗರದ ವಾಸವಿ ಮಹಲ್ ರಸ್ತೆಯಲ್ಲಿದ್ದ ದೊಡ್ಡ ಗುಂಡಿಯನ್ನು ಮುಚ್ಚುವ ಕೆಲಸವನ್ನು ಆರ್ಯವೈಶ್ಯ ಸಂಘವು ಮಾಡಿದೆ.

ನಗರದ ವಾಸವಿ ಮಹಲ್ ಮುಂಭಾಗದಲ್ಲಿ ಪ್ರತಿನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಮತ್ತು ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಇದೊಂದು ಪ್ರಧಾನ ರಸ್ತೆಯಾಗಿದ್ದು, ರಸ್ತೆಯ ತಿರುವಿನಲ್ಲಿ ದೊಡ್ಡ ಗಾತ್ರದ ಗುಂಡಿ ಬಿದ್ದು ಹಾಳಾಗಿತ್ತು. ವಾಹನ ಚಾಲಕರು ಮತ್ತು ಜನರು ಅನೇಕ ಸಂದರ್ಭಗಳಲ್ಲಿ ಬಿದ್ದು, ಗಾಯಗೊಂಡಿರುವುರಸ್ತೆಯ ರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಫಲ ಕಾಣಲಿಲ್ಲ.

ಮಳೆ ಸುರಿದಾಗ ಈ ಗುಂಡಿಯಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರು ಜೀವಭಯದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ಆದ್ದರಿಂದ ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಬಾರದು ಎಂಬ ಸಾಮಾಜಿಕ ಕಳಕಳಿಯಿಂದ ಇಂದು ಆರ್ಯವೈಶ್ಯ ಸಂಘವು ಸುಮಾರು 18,000 ವೆಚ್ಚ ಮಾಡಿ ದೊಡ್ಡ ಗುಂಡಿಯನ್ನು ಮುಚ್ಚಿ ದುರಸ್ತಿ ಕಾರ್ಯ ನಿರ್ವಹಿಸಿದೆ.

ಸಮಾಜ ಉಪಯೋಗಿ ಕಾರ್ಯಕ್ರಮಗಳಿಗೆ ಆರ್ಯವೈಶ್ಯ ಸಂಘ ಸದಾ ಮುಂದು ಎಂಬುದನ್ನು ಈ ಮೂಲಕ ಸಾಬೀತು ಪಡಿಸಿದೆ. ಆರ್ಯವೈಶ್ಯ ಸಂಘದ ನಿರ್ದೇಶಕ ಮಂಡಳಿಯ ನೇತೃತ್ವದಲ್ಲಿ ಈ ದುರಸ್ತಿ ಕಾರ್ಯ ನಡೆದಿರುವುದನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Enable Notifications OK No thanks