ಚಿತ್ರದುರ್ಗ : ಕೋರ್ಟ್ ಬಳಿ ಹಾಡಹಗಲೇ ಕಾರಿನ ಕಿಟಕಿ ಗಾಜು ಒಡೆದು 5 ಲಕ್ಷ ಕಳ್ಳತನ..!

0 Min Read

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.07 :ದುಷ್ಕರ್ಮಿಗಳ ತಂಡವೊಂದು ಕಾರಿನ ಕಿಟಕಿ ಗಾಜು ಒಡೆದು 5 ಲಕ್ಷ ರೂ. ಹಣವನ್ನ ಕಳುವು ಮಾಡಿದ ಘಟನೆ ನಗರದ ಕೋರ್ಟ್ ಬಳಿ ಇಂದು(ಶನಿವಾರ) ನಡೆದಿದೆ.

ನಾಗರಾಜ್ ಎಂಬುವರಿಗೆ ಸೇರಿದ ಹಣ ಎಂದು ತಿಳಿದು ಬಂದಿದೆ. ಕೋರ್ಟ್ ಆವರಣದಲ್ಲಿ ಕಾರು ನಿಲ್ಲಿಸಿ ಕೋರ್ಟ್ ಒಳಗೆ ಹೋಗಿ ಬರುವುದರೊಳಗೆ ಕಳ್ಳರು ಕೈಚಳಕ ತೋರಿಸಿದ್ದಾರೆ.

ಘಟನಾ ಸ್ಥಳಕ್ಕೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *