ಚನ್ನಕೇಶವಸ್ವಾಮಿಯ ಸಂಭ್ರಮದ ಕಲ್ಯಾಣೋತ್ಸವ ಮತ್ತು ವೈಭವದ ರಥೋತ್ಸವ

1 Min Read

ಚಿತ್ರದುರ್ಗ : ಇಲ್ಲಿನ ಕೆಳಗೋಟೆ ಸಿ.ಕೆ.ಪುರದಲ್ಲಿರುವ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಕಲ್ಯಾಣೋತ್ಸವ ಮತ್ತು ರಥೋತ್ಸವ ಸಕಲ ವಾದ್ಯಗಳೊಂದಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಸರ್ವ ಭಕ್ತಾಧಿಗಳಿಂದ ಲೋಕಾರ್ಪಣೆಗೊಂಡ ನೂತನ ರಥವನ್ನು ವಿವಿಧ ಬಗೆಯ ಹೂವು ಹಾರಗಳಿಂದ ಅಲಂಕರಿಸಲಾಗಿತ್ತು. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಇವರುಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ಕೆಳಗೋಟೆಯ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಸಾಗಿತು.

ಚನ್ನಕೇಶವಸ್ವಾಮಿ ದೇವಸ್ಥಾನ ಸಮಿತಿಯ ಸಂಚಾಲಕ ಫಾತ್ಯರಾಜನ್, ನಗರಸಭೆ ಸದಸ್ಯ ಅಂಗಡಿ ಮಂಜಣ್ಣ, ಸುಮಿತ ರಾಘವೇಂದ್ರ, ಮಾಜಿ ಸದಸ್ಯರುಗಳಾದ ಪ್ರಕಾಶ್, ತಿಪ್ಪೇಸ್ವಾಮಿ, ಮಹೇಶ್, ನಗರಸಭೆ ಪೌರಾಯುಕ್ತರಾದ ಹನುಮಂತರಾಜು, ಆರ್ಟಿಸ್ಟ್ ಗಂಗಾಧರ್, ಮಂಜುನಾಥ್, ಸಾನಿಕಂರೆಡ್ಡಿ, ಮಾರುತೇಶ್‍ರೆಡ್ಡಿ, ದೇವಸ್ಥಾನ ಸಮಿತಿಯವರು ಹಾಗೂ ನೂರಾರು ಭಕ್ತರು ರಥೋತ್ಸವದಲ್ಲಿ ಬಾಗವಹಿಸಿ ಶ್ರದ್ದಾ ಭಕ್ತಿಯನ್ನು ಸಮರ್ಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *